ಜಟ್ಟಿಪಳ್ಳ : ಸಾಮೂಹಿಕ ಸತ್ಯನಾರಾಯಣ ಪೂಜೆಯ ಆಮಂತ್ರಣ ಬಿಡುಗಡೆ

0

ಶ್ರೀ ರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ ಸುಳ್ಯ ಇದರ ಸಾಮಾನ್ಯಸಭೆ ದ.17 ರಂದು ಭಜನಾ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಹರಿಶ್ಚಂದ್ರ ಎಂ. ಆರ್. ರ ಅಧ್ಯಕ್ಷತೆಯಲ್ಲಿ ನೆರವೇರಿತು.


ಉಪಾಧ್ಯಕ್ಷರಾದ ರಮಾನಂದ ರೈ, ಕಾರ್ಯದರ್ಶಿ ರಘುನಾಥ ಜಟ್ಟಿಪಳ್ಳ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸ್ವಾಗತಿಸಿ ವರದಿ ವಾಚಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡನೆ ಮಾಡಿದರು. 2024 ಜನವರಿ 9 ರಂದು ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಚನ್ನಕೇಶವ ದೇವರ ಪಟ್ಟಣ ಸವಾರಿ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಅಧ್ಯಕ್ಷರು ಬಿಡುಗಡೆ ಮಾಡಿದರು.

ಯುವಕ ಮಂಡಲ ಅಧ್ಯಕ್ಷ ಹರೀಶ್ ಜೆ.ಬಿ., ಕಾನೂನು ಸಲಹೆಗಾರ ತನುದೀಪ್, ಸಂಘದ ಪೋಷಕರಾದ ಶ್ರೀಮತಿ ಲತಾ ಸದಾನಂದ, ಸದಸ್ಯರಾದ ಕುಲದೀಪ್ ಪೆಲ್ತಡ್ಕ, ಚೇತನ್, ವಿಪಿನ್, ಚಂದ್ರಹಾಸ ಎನ್. ಎಸ್, ಶ್ರೀಮತಿ ರೋಹಿಣಿ ಕುಲದೀಪ್, ಶ್ರೀಮತಿ ಸುಶೀಲ ಚಂದ್ರಶೇಖರ್ ಉಪಸ್ಥಿತರಿದ್ದರು.