ಪಂಜ : ವಿನೋದ್ ಬೊಳ್ಮಲೆ ರವರಿಗೆ ಸನ್ಮಾನ

0

ಸಂಸದರ ಆದರ್ಶ ಗ್ರಾಮ, ಗ್ರಾಮ ವಿಕಾಸ ಪ್ರತಿಷ್ಠಾನ,ಬಳ್ಪ ನಾದೂರು ಪಂಡಿಕಜೆ ಸಜ್ಜನ ರಸ್ತೆ ಫಲಾನುಭವಿಗಳ ವತಿಯಿಂದ ಯೋಜನೆ ಅನುಷ್ಠಾನ ಹಾಗು ಕಾಮಗಾರಿ ಪೂರ್ಣಗೊಳ್ಳುವಲ್ಲಿ ಶ್ರಮ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಯವರಿಗೆ ಸನ್ಮಾನ ಕಾರ್ಯಕ್ರಮ ಡಿ. ೧೭ ರಂದು ರವೀಂದ್ರ ಆಚಾರ್ಯರವರ ನಿವಾಸದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನೋದ್‌ರವರು ಆದರ್ಶ ಗ್ರಾಮ ಯೋಜನೆ ಪೂರ್ಣ ಗೊಳ್ಳುವಲ್ಲಿ ನಡೆಸಿದ್ದ ಓಡಾಟವನ್ನು ಬಿಚ್ಚಿಟ್ಟರು.
ಸನ್ಮಾನ ಕಾರ್ಯಕ್ರಮ ಸಂಘಟಿಸಿ ದ ರಸ್ತೆ ಫಲಾನುಭವಿಗಳಿಗೆ ಶುಭಹಾರೈಸಿ ತನ್ನ ಮುಂದಿರುವ ಇನ್ನೂ ಕೆಲವು ಕಾರ್ಯಯೋಜನೆಗಳಿಗೆ ನಾಗರಿಕರ ಸಹಕಾರ ಯಾಚಿಸಿದರು.

ವೇದಿಕೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನ ಪಂಜ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಪದ್ಮನಾಭ ರೈ, ಸುಬ್ರಹ್ಮಣ್ಯ ಕುಳ,ಮೋಹನ್ ಗೌಡ,ನಾಗಪ್ಪ ಗೌಡ,ಹಾಗೂ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಧಾಕೃಷ್ಣ ನಾದೂರು ಕಾರ್ಯಕ್ರಮ ನಿರೂಪಿಸಿ, ಬೆಳಿಯಪ್ಪ ನಾದೂರು ಸ್ವಾಗತಿಸಿದರು .ಕುಸುಮಾಧರ ಕುಂಜತ್ತಾಡಿ ವಂದಿಸಿದರು.