ಪಂಜ: ಜಾಂಡೀಸ್ ಗೆ ಯುವಕ ಬಲಿ

0

ಜಾಂಡೀಸ್ ಗೆ ಯುವಕನೋರ್ವ ಮೃತಪಟ್ಟ ಘಟನೆ ಡಿ.26 ರಂದು ಪಂಜದಿಂದ ವರದಿಯಾಗಿದೆ.

ಕೂತ್ಕುಂಜ ಗ್ರಾಮದ ಕಲ್ಕ ದಿ.ಪದ್ಮಯ್ಯ ಗೌಡ ಮತ್ತು ಶ್ರೀಮತಿ ಇಂದಿರಾ ದಂಪತಿಗಳ ಪುತ್ರ ಪ್ರಶಾಂತ್ ಮೃತ ಪಟ್ಟವರು.ಅವರಿಗೆ 39 ವರುಷ ವಯಸ್ಸಾಗಿತ್ತು.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ
ಅವರು ಕೆಲವು ಸಮಯಗಳ ಹಿಂದೆ ಮನೆಗೆ ಬಂದಿದ್ದರು.ಅವರು ಜಾಂಡಿಸ್ ಗೆ ಒಳಗಾದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಡಿ.25 ರಂದು ಮತ್ತೆ ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ತುತ್ತಾಗಿ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿ.26 ರಂದು ಕೊನೆಯುಸಿರೆಳೆದರು.
ಮೃತರು ಅವಿವಾಹಿತರಾಗಿದ್ದು ತಾಯಿ, ಸಹೋದರಿಯರಾದ ಶ್ರೀಮತಿ ಕಿಶೋರಿ ಗಣಪತಿ ಚೆರ್ ಕನ ಮನೆ, ಶ್ರೀಮತಿ ಪ್ರತಿಮಾ ಸುರೇಶ ಬೆದ್ರಂಗಳ, ಶ್ರೀಮತಿ ಪ್ರಮೀಳಾ ಗಿರೀಶ್ ಮೊಟ್ಟನ ಮನೆ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.