ಡಿ.27ರಂದು ಸರಕಾರಿ ನೌಕರರ ಸಂಘದಿಂದ ಸುಳ್ಯದಲ್ಲಿ ರಕ್ತದಾನ ಶಿಬಿರ

0

ಕರ್ನಾಟಕ ರಾಜ್ಯ ಸರಕಾರಿ‌ ನೌಕರರ ಸಂಘ ಸುಳ್ಯ ಘಟಕ, ತಾಲೂಕು ಕಚೇರಿ ಸುಳ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಸಹಯೋಗದಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ರಕ್ತದಾನ ಶಿಬಿರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿ.27‌ರಂದು‌ ನಡೆಯಲಿದೆ.

ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಅಧ್ಯಕ್ಷತೆ‌ ವಹಿಸಲಿದ್ದಾರೆ.. ಶಾಸಕಿ‌ ಭಾಗೀರಥಿ ಮುರುಳ್ಯ ಉದ್ಘಾಟನೆ ‌ನೆರವೇರಿಸಲಿದ್ದಾರೆ. ತಹಶೀಲ್ದಾರ್ ಮಂಜುನಾಥ್ ಕ್ಯಾಲೆಂಡರ್ ‌ಬಿಡುಗಡೆ‌ ಮಾಡಲಿದ್ದಾರೆ. ತಾ.ಪಂ. ಇ.ಒ. ರಾಜಣ್ಣ, ಮೆಸ್ಕಾಂ ಎ.ಇ.ಇ.‌ಹರೀಶ್‌ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಸಭಾಪತಿ ಪಿ.ಬಿ.ಸುಧಾಕರ ರೈ ಸಂಪನ್ಮೂಲ ‌ವ್ಯಕ್ತಿಯಾಗಿ‌ ಭಾಗವಹಿಸುವರು. ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ‌ಸದಸ್ಯ‌ ಪೃಥ್ವಿಕುಮಾರ್ ಗೌರವ ಉಪಸ್ಥಿತರಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.