ಮಂಡೆಕೋಲು : ಭಾರತ ವಿಕಸಿತ ಸಂಕಲ್ಪ ಯಾತ್ರೆ ಆಗಮನ

0

ಗ್ರಾಮ ಪಂಚಾಯತ್ ಮಂಡೆಕೋಲು ಮತ್ತು ಕೆನರಾ ಬ್ಯಾಂಕ್ ಜಾಲ್ಸೂರು ಶಾಖೆ ಇವುಗಳ ಜಂಟಿ ಆಶ್ರಮದಲ್ಲಿ ಭಾರತ ವಿಕಸಿತ ಸಂಕಲ್ಪ ಯಾತ್ರೆ ಮಂಡೆಕೋಲು ಗ್ರಾಮಕ್ಕೆ ಆಗಮಿಸಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ. ಅಧ್ಯಕ್ಷತೆ ವಹಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿದರು.

ಕೆನರಾ ಬ್ಯಾಂಕ್‌ಜಾಲ್ಸೂರು ಶಾಖೆಯ ಅಧಿಕಾರಿ‌ ಮಹಾಲಕ್ಷ್ಮಿ ಮಾತನಾಡಿದರು.

ಸಂಕಲ್ಪ ವಿಕಸಿತ ಭಾರತ ರಥದ ಆಗಮನ, ಸಂಕಲ್ಪ ರಥದ ಸ್ವಾಗತವನ್ನು ಬರಮಾಡಿಕೊಂಡು ವೀಡಿಯೋ ಪ್ಲೇ ಮಾಡಲಾಯಿತು. ಕಾಯ೯ಕ್ರಮ ದಲ್ಲಿ ಶಿಕ್ಷಣ, ಕೃಷಿ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

ಪಂಚಾಯತ್ ಉಪಾಧ್ಯಕ್ಷೆ ‌ಪ್ರತಿಮಾ‌ ಹೆಬ್ಬಾರ್, ಪಿಡಿಒ ರಮೇಶ್, ಕೆನರಾ ಬ್ಯಾಂಕ್ ಸಿಬ್ಬಂದಿ ಸುಜಾತ, ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ‌ಸುಭೋದ್ ಶೆಟ್ಟಿ ಮೇನಾಲ, ಮೀನುಗಾರಿಕಾ ಇಲಾಖೆ ಅಧಿಕಾರಿ ರವೀಂದ್ರನಾಥ ‌ಪಾಟೀಲ ವೇದಿಕೆಯಲ್ಲಿ ಇದ್ದರು.

ಗ್ರಾ.ಪಂ. ಸದಸ್ಯರು ಅಂಗನವಾಡಿ, ಆಶಾ, ಆರೋಗ್ಯ ಸೇರಿದಂತೆ ‌ವಿವಿಧ ಸಂಘ ಸಂಸ್ಥೆಗಳವರು ಉಪಸ್ಥಿತರಿದ್ದರು. ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ವಿನುತಾ‌ ಪಾತಿಕಲ್ಲು ಕಾರ್ಯಕ್ರಮ ನಿರ್ವಹಿಸಿದರು.