ಅಕ್ಕಪ್ಪಾಡಿ ಕೃಷಿ‌ ತೋಟಕ್ಕೆ ಆನೆಗಳ ಹಿಂಡು : ಕೃಷಿ‌ ಹಾನಿ

0

ಮಂಡೆಕೋಲಿನ ಸುತ್ತಮುತ್ತಲಿನ ಕಾಡುಗಳಲ್ಲಿ ‌ಬೀಡು‌ಬಿಟ್ಟಿರುವ ಆನೆಗಳ ಹಿಂಡು ಜ.6ರಂದು‌ ರಾತ್ರಿ ಕೃಷಿ ತೋಟಕ್ಕೆ ನುಗ್ಗಿದ ಪರಿಣಾಮ ಕೃಷಿ ಹಾನಿಗೊಂಡಿರುವುದಾಗಿ ವರದಿಯಾಗಿದೆ.

ಅಕ್ಕಪ್ಪಾಡಿಯ ಅಪ್ಪಯ್ಯ‌ ಮಣಿಯಾಣಿ ಹಾಗೂ ವಿಶ್ವನಾಥ ಎಂಬವರ ತೋಟಕ್ಕೆ ಆನೆಗಳ ಹಿಂಡು‌ ಲಗ್ಗೆ ಇಟ್ಟಿದೆ. ಪರಿಣಾಮ ಅಡಿಕೆ, ಬಾಳೆ ಗಿಡ ಹಾನಿಗೊಂಡಿದೆ.