ಚೆನ್ನಾವರ : ಮಳೆಗೆ ಕೃಷಿ ತೋಟಕ್ಕೆ ಹಾನಿ – ಅಪಾರ ನಷ್ಟ

0

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ – ಪರಿಶೀಲನೆ

ಪೆರುವಾಜೆ ಗ್ರಾಮದ ಚೆನ್ನಾವರ ಕುಂಡಡ್ಕ ದಲ್ಲಿ ಜ.06 ರಂದು ಸುರಿದ ಮಳೆಗೆ ಕಿಂಡಿ ಅಣೆಕಟ್ಟಿನ ಬದಿಯಲ್ಲಿರುವ ಕೃಷಿ ತೋಟ ನೀರಿಗೆ ಕೊಚ್ಚಿಹೋಗಿದೆ.
ಜ.07 ರಂದು ಶಾಸಕಿ ಕು.ಭಾಗೀರಥಿ ಮುರುಳ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಣ್ಣ ನೀರಾವರಿ ಇಲಾಖೆಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು ಜ.08 ರಂದು ಸಣ್ಣ ನೀರಾವರಿ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.


ಅಣೆಕಟ್ಟಿಗೆ ನೀರು ಸಂಗ್ರಹಕ್ಕಾಗಿ ಕಟ್ಟ ಹಾಕಿದ್ದ ಕಾರಣ ಮಳೆ ನೀರು ತುಂಬಿ ಒಂದು ಬದಿಯಿಂದ ಕೊಚ್ಚಿ ಹೋಗಿದ್ದು ಪುತ್ತು ಚೆನ್ನಾವರ ಎಂಬವರ ತೋಟದ 100 ಕ್ಕೂ ಮಿಕ್ಕಿ ಅಡಿಕೆ ಗಿಡ,ಮರಗಳು ಬಿದ್ದು ಕೊಚ್ಚಿ ಹೋಗಿದ್ದು ಅಪಾರ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ತೋಟದ ಮಾಲಕರಾದ ಪುತ್ತು ಚೆನ್ನಾವರ,ಕುಶಾಲಪ್ಪ ಪೆರುವಾಜೆ,ದಯಾನಂದ ರೈ ಕನ್ನೆಜಾಲು ,ಗ್ರಾ.ಪಂ.ಮಾಜಿ ಸದಸ್ಯ ಚನಿಯ ಕುಂಡಡ್ಕ,ಅದ್ರಾಂ ಚೆನ್ನಾವರ ಮತ್ತಿತರರು ಉಪಸ್ಥಿತರಿದ್ದರು.