ಬಾರೀ ಮಳೆ : ಚೆನ್ನಕೇಶವ ದೇವಸ್ಥಾನದ ಜಾತ್ರಾ ಸಂತೆಯಲ್ಲಿ ನೀರು – ಸಮಸ್ಯೆಗೆ‌ ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಸ್ಪಂದನೆ

0

ನಿನ್ನೆ (ಜ.9) ಸಂಜೆ ಸುರಿದ‌ ಭಾರೀ ಮಳೆಯ ಪರಿಣಾಮ ಸುಳ್ಯ‌ ಚೆನ್ನಕೇಶವ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ನೀರು ನಿಂತಿತ್ತು. ಜಾತ್ರೋತ್ಸವ ಸಂದರ್ಭ ಆಗಿದ್ದುದರಿಂದ ಜಾತ್ರೆಯಲ್ಲಿ ಅಂಗಡಿ ಇಟ್ಟವರಿಗೆ ಇದರಿಂದ ಕಿರಕಿರಿ ಆಗ ತೊಡಗಿತ್ತು.

ವಿಷಯ‌ ತಿಳಿದ ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ತಾವೇ ಕೋಲೊಂದನ್ನು ಹಿಡಿದು, ನೀರು ಚರಂಡಿಗೆ ಹರಿಯುವಂತೆ‌ ಮಾಡಿದರು. ಈ ಸಮಸ್ಯೆ ಅರಿತ ಅವರು‌ ನಗರ ಪಂಚಾಯತ್ ಅಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ಸಿಬ್ಬಂದಿಗಳನ್ನು ಕರೆಸಿಕೊಂಡು‌ ಸಮಸ್ಯೆ ಪರಿಹರಿಸಿದರು.