ಬಾಳಿಲ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಪ್ರತಿಭಾ ದಿನೋತ್ಸವ ಹಾಗೂ ವಾರ್ಷಿಕೋತ್ಸವ

0

ಬಾಳಿಲ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಪ್ರತಿಭಾ ದಿನೋತ್ಸವ ಹಾಗೂ ಮಕ್ಕಳ ಹಬ್ಬ ವಾಷಿ೯ಕೋತ್ಸವವನ್ನು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪೋಷಕರ ಸಂಘದ ಅಧ್ಯಕ್ಷರಾದ ರವೀಶ್ ಕುಮಾರ್ ವಹಿಸಿದ್ದರು,ಜಯಂತ ಕೆ ಸಮೂಹ ಸಂಪನ್ಮೂಲ ವ್ಯಕ್ತಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ಮಖ್ಯ ಅಥಿತಿಗಳಾಗಿ ವಿದ್ಯಾಬೋಧಿನಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ್, ವಿದ್ಯಾಬೋಧಿನಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ಮೂತಿ೯ ಉಪಸ್ಥಿತರಿದ್ದರು,ಶಾಲಾ ಮೇಲ್ವಿಚಾರಕರರಾದ ಮಾಧವ ಕೆ ವರದಿ ವಾಚಿಸಿದರು, ಶಿಕ್ಷಕಿ ರೋಹಿಣಿ ಸ್ವಾಗತಿಸಿದರು.ಶಿಕ್ಷಕ ಶಿವಕುಮಾರ್ ಹಾಗೂ ಶಿಕ್ಷಕಿ ಸುಜಾತ ಕಾಯ೯ಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿ ಭವ್ಯ ವಂದನಾಪ೯ಣೆ ನೆರವೇರಿಸಿದರು.

ಶಾಲಾ ವಿದ್ಯಾಥಿ೯ ನಾಯಕಿ ಧ್ಯಾನ ಉಪಸ್ಥಿತರಿದ್ದರು .ಆಶ್ರಮ ಶಾಲಾ ಹಾಗು ವಿದ್ಯಾಥಿ೯ ನಿಲಯದ ವಿದ್ಯಾರ್ಥಿಗಳಿಗೆ ಆಟೋಟ ಸ್ಪಧೆ೯ಯನ್ನು ಏರ್ಪಾಡಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸುವುದರೊಂದಿಗೆ ಆಶ್ರಮ ಶಾಲೆ ಹಾಗೂ ವಿದ್ಯಾಥಿ೯ನಿಲಯದ ವಿದ್ಯಾಥಿ೯ಗಳಿಂದ ಸಾಂಸ್ಕೃತಿಕ ಕಾಯ೯ಕ್ರಮ ನಡೆಯಿತು.