ಪೆರುವಾಜೆ ರಥೋತ್ಸವ ದಿನ ವಿಶೇಷ ಸಾರಿಗೆ ಬಸ್ಸಿಗೆ ಮನವಿ

0

ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಂದ ಭರವಸೆ

ಪೆರುವಾಜೆ ಶ್ರೀ ಉದ್ಭವ ಜಲದುರ್ಗಾ ದೇವಿ ದೇವಸ್ಥಾನದ ನೂತನ ರಥೋತ್ಸವ ಜ. 19 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಆಗಲು ಮಾಡಾವು, ಕಾಣಿಯೂರು,ಸವಣೂರು, ಕಲ್ಮಡ್ಕ,ಬಾಳಿಲ, ಪೆರ್ಲಂಪಾಡಿ, ಐವರ್ನಾಡು ಈ ಸ್ಥಳಗಳಿಂದ ಸಂಜೆ ಮತ್ತು ರಾತ್ರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ- ಅವರು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ ನಿಯಂತ್ರಣಾದಿಕಾರಿ ಅವರಿಗೆ ಮನವಿ ಮಾಡಿದರು. ಇಲಾಖೆಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಸಚಿನ್ ತಿಳಿಸಿದ್ದಾರೆ.