ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸುಳ್ಯ ತಾಲೂಕು ರೈತ ಸಂಘದ ವತಿಯಿಂದ ಜನತಾದರ್ಶನದಲ್ಲಿ ಸಚಿವರಿಗೆ ಮನವಿ

0

ಸುಳ್ಯದ ಕೆ ವಿ ಜಿ ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಜ. 23 ರಂದು ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ರೈತ ಸಂಘದ ವತಿಯಿಂದ ಕೃಷಿಕರ ಸಮಸ್ಯೆಗಳಾದ ಅಡಿಕೆ ಎಲೆ ಹಳದಿ ರೋಗ, ಮಂಗಗಳ ಉಪಟಳದಿಂದ ಕೃಷಿ ನಾಶಕ್ಕೆ ಶಾಶ್ವತ ಪರಿಹಾರ, ಬೆಳೆ ವಿಮೆ ಹಾಗೂ 5ಲಕ್ಷದವರೆಗಿನ ಬಡ್ಡಿ ರಹಿತ ಸಾಲದ ಸಮಸ್ಯೆಗಳ ವಿವರವಾದ ಮನವಿಯನ್ನು ಕೊಟ್ಟು ಪರಿಹಾರಕ್ಕೆ ಒತ್ತಾಯಿಸಲಾಯಿತು.
ಕೃಷಿಕರ ಹಲವಾರು ಸಮಸ್ಯೆಗಳ ಪಟ್ಟಿಯನ್ನು ಮನವಿಯಲ್ಲಿ ನೀಡಲಾಯಿತು.

ಇತ್ತೀಚೆಗೆ ಎಲೆ ಹಳದಿ ರೋಗದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆಲೆಟ್ಟಿ ಗ್ರಾಮದ ಜಗದೀಶ ಚಲ್ಲಂಗಾರು ಮತ್ತು ಮರ್ಕಂಜ ಗ್ರಾಮದ ತೋಟಚಾವಾಡಿ ನಾರಾಯಣ ನಾಯಕ್ ಅವರ ಕುಟುಂಬಕ್ಕೆ ಪರಿಹಾರ ಧನವಾಗಿ ರೂ 25,00,000(ಇಪ್ಪತ್ತೈದು ಲಕ್ಷ ) ನೀಡಬೇಕಾಗಿ ಒತ್ತಾಯಿಸಲಾಯಿತು.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಅರಂಬೂರು, ವಸಂತ ಪೆಲತ್ತಡ್ಕ, ತಾಲೂಕು ಉಪಾಧ್ಯಕ್ಷರಾದ ಸುಳ್ಯಕೋಡಿ ಮಾಧವ, ಮಂಜುನಾಥ ಮಡ್ತಿಲ, ಚೆನ್ನಕೇಶವ ಚೊಕ್ಕಾಡಿ, ತೀರ್ಥರಾಮ ಬಾಳೆಕಜೆ, ತೀರ್ಥರಾಮ ಉಳುವಾರು, ಸೇಬಾಷ್ಟಿಯನ್ ಡಿ ಸೋಜಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.