ಫೆ.2: ಪಂಜ ಜಾತ್ರೆಗೆ ಬಂಟಮಲೆಯಿಂದ ತೀರ್ಥ

0

ಬಂಟಮಲೆಗೆ ಬರುವ ಭಕ್ತರಿಗೆ ಸೂಚನೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ
ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರಲು ಫೆ.2 ರಂದು ಬೆಳಿಗ್ಗೆ ಗಂಟೆ 7ಕ್ಕೆ ಹೋಗುವುದು.
ಹೋಗುವಾಗ ವಾಹನದಲ್ಲಿ ಹೋಗಿ ಬರುವಾಗ ನಡೆದುಕೊಂಡು ಬರುವುದು.
ಬರುವ ಭಕ್ತಾದಿಗಳು
ಬೆಳಿಗ್ಗೆ ಗಂಟೆ 7 ಕ್ಕೆ ದೇವಾಲಯದಲ್ಲಿ ಸೇರಿರ ಬೇಕು.ಅಥವಾ ನೇರವಾಗಿ ಬಂಟಮಲೆಗೆ ಬರಬೇಕು ಎಂದು ಉತ್ಸವ ಅಧ್ಯಕ್ಷ ಡಾ ದೇವಿ ಪ್ರಸಾದ್ ಕಾನತ್ತೂರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.1.ರಂದು ರಾತ್ರಿ ಗಂಟೆ 7 ಕ್ಕೆ ವರ್ಷಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣ ನಡೆಯಲಿದೆ.‌ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಮುಗುರ ಮಲ್ಲಿಗೆ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ.