ಸುಳ್ಯದ ನೂತನ ವೃತ್ತ ನಿರೀಕ್ಷಕರಾಗಿ ಕೆ ಸತ್ಯನಾರಾಯಣ ಅಧಿಕಾರ ಸ್ವೀಕಾರ

0

ಸುಳ್ಯ ಪೊಲೀಸ್ ವೃತ್ತದ ನೂತನ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡು ಬಂದಿರುವ ಕೆ . ಸತ್ಯನಾರಾಯಣ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿ ಹಾಗೂ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೂತನ ವೃತ್ತ ನಿರೀಕ್ಷಕರನ್ನು ಸ್ವಾಗತಿಸಿದರು.

ಚುನಾವಣಾ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರುವಿನಿಂದ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದಿರುವ ಸತ್ಯನಾರಾಯಣರವರು
ಶೃಂಗೇರಿ ಮೂಲದವರು. ಬೆಂಗಳೂರು, ಶ್ರೀರಾಂಪುರ,ಶಿಗ್ಗಾವಿ, ಚಿಕ್ಕಮಗಳೂರು, ಕಡೂರು, ಮುಂತಾದ ಕಡೆಗಳಲ್ಲಿ ಇವರು ಕರ್ತವ್ಯ ನಿರ್ವಹಿಸಿದ್ದಾರೆ. ಉತ್ತಮ ಸೇವೆಗೆ 2018ರಲ್ಲಿ ರಾಷ್ಟ್ರಪತಿ ಪದಕ,ಹಾಗೂ 2019ರಲ್ಲಿ ಮುಖ್ಯಮಂತ್ರಿ ಪದಕವನ್ನು ಅವರು ಪಡೆದುಕೊಂಡಿದ್ದಾರೆ.