ಸುಬ್ರಹ್ಮಣ್ಯ : ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಸಾತ್ವಿಕ್ ಐ.ಐ.ಟಿ ಯ, ಜೆ.ಇ.ಇ‌ ಮೈನ್ಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ಸಾತ್ವಿಕ್ ಎಚ್. ಎಸ್, ಐ.ಐ.ಟಿ ಯ ಜೆ.ಇ.ಇ‌ ಮೈನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿದ್ದಾರೆ.

ಈ ಭಾಗದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಈ ಪರೀಕ್ಷೆಗೆ ಹಾಜರಾಗುತಿದ್ದು ಸಾತ್ವಿಕ್ ಪ್ರಥಮ ಪ್ರಯತ್ನದಲ್ಲೇ ಉನ್ನತ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.

ಇದರೊಂದಿಗೆ ಜೆ.ಇ.ಇ‌ ಅಡ್ವಾನ್ಸ್ ಪರೀಕ್ಷೆ ಬರೆಯುವ ಅರ್ಹತೆ ಪಡೆದು ಕೊಂಡಿರುತ್ತಾರೆ. ವಿಜ್ಞಾನ ಮತ್ತು ಗಣಿತವನ್ನು ಅಭ್ಯಸಿಸಿ ಗಣಿತಜ್ಞ ನಾಗುವ ಕನಸ್ಸು ಇವರದ್ದು. ಗಣಿತ ಶಾಸ್ತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ ಬೇಕೆಂದು ಗುರಿ ಹೊಂದಿರುವ ಇವರು ಎಸ್.ಎಸ್.ಎಲ್.ಸಿ.ಯಲ್ಲೂ ರಾಜ್ಯಕ್ಕೆ ಟಾಪರ್ ಆಗಿದ್ದರು. ಇವರು ಅಮರ ಪಡ್ನೂರು ಗ್ರಾಮದ ಡಾ.ಶಶಿಧರ್ ಹಾಸನಡ್ಕ ಮತ್ತು ಡಾ. ಅನುಪಮಾ ದಂಪತಿಗಳ ಪುತ್ರ.