ಎಣ್ಮೂರು : ನೇಮೋತ್ಸವದ ಪ್ರಯುಕ್ತ ಸ್ವಚ್ಛತೆ, ಶ್ರಮದಾನ

0

ಎಣ್ಮೂರು ಶ್ರೀನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಮಾರ್ಚ್ ೨೩ ರಂದು ನಡೆಯಲಿರುವ ಪ್ರಯುಕ್ತ ನಿರಂತರ ಪ್ರತೀ ಆದಿತ್ಯವಾರ ನಡೆಯುತ್ತದೆ

. ಪ್ರಥಮ ಹಂತವಾಗಿ ಮಾ.೩ ರಂದು ಸ್ವಚ್ಛತೆಯ ಮೂಲಕ ಹೊರಂಗಣ,ಒಳಂಗಣ, ಕಸಕಡ್ಡಿ ತೆಗೆದು ಸುಣ್ಣ ಬಣ್ಣದೊಂದಿಗೆ ಶ್ರಮದಾನ ನಡೆಯಿತು. ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಎನ್.ಜಿ.ಲೋಕನಾಥ ರೈ, ಎಡಮಂಗಲ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ಸುಜಿತ್ ರೈ ಪಟ್ಟೆ, ವೇಣುಗೋಪಾಲ ರೈ ಕಲ್ಲೇರಿ, ಶ್ರೀಧರ ಕಲ್ಲೇರಿ, ಸ್ಥಳೀಯ ಭಕ್ತಾಧಿಗಲ್ಲದೆ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಎಣ್ಮೂರು ಅಧ್ಯಕ್ಷ ಪುಟ್ಟಣ್ಣ ಕೋಡ್ಲೆ, ಸೇವಾ ಪ್ರತಿನಿಧಿ ವಿಶಾಲಕ್ಷಿ ಡಿ.ಸದಸ್ಯರು ಉಪಸ್ಥಿತರಿದ್ದರು.