ಕನಕಮಜಲು: ಶ್ರೀಮತಿ ಸೀತಮ್ಮ ನರಿಯೂರು ವೈಕುಂಠ ಸಮಾರಾಧನೆ – ನುಡಿನಮನ ಸಲ್ಲಿಕೆ

0

ಕನಕಮಜಲು ಗ್ರಾಮದ ‌ನರಿಯೂರು ಶ್ರೀಮತಿ ಸೀತಮ್ಮ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಮಾ.10ರಂದು ನರಿಯೂರು ಮನೆಯಲ್ಲಿ ನಡೆಯಿತು.

ಸುಮಿತ್ರ ಇಂಜಿನಿಯರ್ ದೇರಾಜೆ ಅವರು ಶ್ರೀಮತಿ ಸೀತಮ್ಮ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು .

ಈ ಸಂದರ್ಭದಲ್ಲಿ ಸೀತಮ್ಮ ಅವರ ಮಕ್ಕಳಾದ ಶ್ರೀಧರ ಗೌಡ ನರಿಯೂರು, ಶ್ರೀಮತಿ ರೇವತಿ, ಶ್ರೀಮತಿ ಇಂದ್ರಾವತಿ ನರಿಯೂರು, ಶ್ರೀಮತಿ ವಿಶಾಲಾಕ್ಷಿ ನರಿಯೂರು, ಸೀತಾರಾಮ ನರಿಯೂರು, ವಿಜಯಕುಮಾರ್ ನರಿಯೂರು, ಶ್ರೀಮತಿ ನಿರ್ಮಲ , ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಮುಖಂಡರುಗಳಾದ ಧನಂಜಯ ಅಡ್ಪಂಗಾಯ, ಎನ್. ಜಯಪ್ರಕಾಶ್ ರೈ, ಜಿ. ಕೃಷ್ಣಪ್ಪ, ದಿನೇಶ್ ಅಂಬೆಕಲ್ಲು, ಸದಾನಂದ ಮಾವಜಿ, ಮಹಮ್ಮದ್ ಫವಾಝ್ ಸೇರಿದಂತೆ ಗಣ್ಯರು, ಹಿತೈಷಿಗಳು ಭಾಗವಹಿಸಿದ್ದರು.