ಸುಬ್ರಹ್ಮಣ್ಯ: ಆನಂದ ಸಿಂಗ್ ದೇಣಿಗೆಯ ಸಪ್ತಧೇನು ಗೋದಾಮ ಮಂದಿರ, ಕೃಷ್ಣ ಶೆಟ್ಟಿ ದೇಣಿಗೆಯ ಆಶ್ಲೇಷ ಬಲಿ ಕಟ್ಟಡಕ್ಕೆ ಗುದ್ದಲಿ ಪೂಜೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ ಆನಂದ ಸಿಂಗ್ ಹಾಗೂ ಮಾಜಿ ಸಚಿವ ಕೃಷ್ಣ ಶೆಟ್ಟಿ ಅವರ ದೇಣಿಗೆಯಲ್ಲಿ ನಿರ್ಮಾಣವಾಗಲಿರುವ ಸಪ್ತಧೇನು ಗೋಧಾಮ ಮಂದಿರದ ಹಾಗೂ ಆಶ್ಲೇಷ ಬಲಿ ನೆರವೇರಿಸುವ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮ ಮಾ.9 ರಂದು ನಡೆಯಿತು.

ಆಶ್ಲೇ಼ಷ ಬಲಿ ಕಟ್ಟಡದ ದಾನಿಗಳಾದ ಕೃಷ್ಣ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಮಾಜಿ ಸಚಿವ ಆನಂದ ಸಿಂಗ್ ಅವರ ದೇಣಿಗೆಯಲ್ಲಿ ಅಂದಾಜು ೨೫ ಲಕ್ಷ ವೆಚ್ಚದಲ್ಲಿ ಆದಿಸುಬ್ರಹ್ಮಣ್ಯ ರಸ್ತೆಯ ಬಳಿ ಸಪ್ತಧೇನು ಗೋಧಾಮ ನಿರ್ಮಾಣವಾಗಲಿದೆ. ದೇವಳದ ಅನ್ನಛತ್ರದ ಬಳಿ ಮಾಜಿ ಸಚಿವ ಕೃಷ್ಣ ಶೆಟ್ಟಿ ದೇಣಿಗೆಯಲ್ಲಿ ಆಶ್ಲೇಷ ಬಲಿ ನೆರವೇರಿಸುವ ಕಟ್ಟಡ ನಿರ್ಮಾಣವಾಗಲಿದೆ.

ಕ್ಷೇತ್ರದ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ಶ್ರೀವತ್ಸಾ ಬೆಂಗಳೂರು, ಶೋಭಾ ಗಿರಿಧರ್, ಮನೋಹರ ರೈ, ವನಜಾ ವಿ.ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ, ಪ್ರಮುಖರಾದ ವಿಮಲ ರಂಗಯ್ಯ, ಹರೀಶ್ ಇಂಜಾಡಿ, ಲೋಲಾಕ್ಷ, ಪವನ್ ಎಂ.ಡಿ ಮತ್ತಿತರರು ಹಾಜರಿದ್ದರು.