ಇರಂತಮಜಲು – ಬೇಲ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

0

ಅಜ್ಜಾವರ ಗ್ರಾಮದ ಇರಂತಮಜಲು ಬೇಲ್ಯ ರಸ್ತೆಗೆ ಶಾಸಕರ ವಿಶೇಷ ಅನುದಾನದಿಂದ 10ಲಕ್ಷ ದೊರೆತ್ತಿದ್ದು, ಮಾ.16ರಂದು ಗುದ್ದಲಿಪೂಜೆ ನಡೆಯಿತು.

ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ಪ್ರಬೋದ್ ಶೆಟ್ಟಿ ಮೇನಾಲ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಕಿಟ್ಟಣ್ಣ ರೈ‌ಮೇನಾಲ, ಕಮಲಾಕ್ಷ ರೈ ಮೇನಾಲ, ಸಂತೋಷ್ ರೈ ಬೇಲ್ಯ,ನಾರಾಯಣ ನಾಯ್ಕ್, ಅಶೋಕ್ ಪೂಜಾರಿ ಮೊದಲಾದವರು ಇದ್ದರು.