ಕಾಯರ್ತೋಡಿ: ಶ್ರೀ ವರದಾಯಿನಿ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ

0

ಸುಳ್ಯದ ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯು ಮಾ.16ರಂದು ಸಂಜೆ ದೇವಸ್ಥಾನದ ವಠಾರದಲ್ಲಿ ಜರುಗಿತು.
ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಡಿ‌.ಎಸ್. ಗಿರೀಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವವು ಎ.11ರಂದು ಜರುಗಲಿದ್ದು, ಸ್ವಚ್ಛತಾ ಕಾರ್ಯ, ಆಮಂತ್ರಣ ಪತ್ರಿಕೆ ವಿತರಣೆ ಸೇರಿದಂತೆ ಜಾತ್ರೋತ್ಸವದ ಪೂರ್ವ ತಯಾರಿಯ ಕುರಿತಂತೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಮಾಜಿ ಅಧ್ಯಕ್ಷ ಡಿ‌.ಎಸ್. ಕುಶಾಲಪ್ಪ, ಡಿ.ಎಸ್. ಶೇಷಪ್ಪ, ಬಿ.ಕೆ. ವಿಠಲ, ವಾಸುದೇವ ಡಿ., ಸಂದೀಪ್ ಡಿ.ಕೆ. ಡಿ.ಎಸ್. ವಿದ್ಯಾಧರ, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಶ್ರೀಮತಿ ಶಾಂಭವಿ ವಿಷ್ಣುಸರ್ಕಲ್, ಶ್ರೀಮತಿ ಶ್ವೇತ ಪ್ರಶಾಂತ್ ಕಾಯರ್ತೋಡಿ, ಶ್ರೀಮತಿ ಯಶೋಧ ವಿಶ್ವನಾಥ, ಕೃಷ್ಣಬೆಟ್ಟ ಕಾಯರ್ತೋಡಿ ಉಪಸ್ಥಿತರಿದ್ದರು. ಅಧ್ಯಕ್ಷ ಡಿ.ಎಸ್. ಗಿರೀಶ್ ಸ್ವಾಗತಿಸಿ, ವಾಸುದೇವ ಡಿ. ವಂದಿಸಿದರು.