ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ದುರಸ್ತಿ ಕಾಣದ ರಸ್ತೆ ಹಾಗೂ ಅಪಾಯಕಾರಿ ತಡೆ ಗೋಡೆ

0

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಹಿಂದುಸ್ತಾನ್ ಬಿಲ್ಡಿಂಗ್ ಬಳಿ ನಾವೂರು ರಸ್ತೆಗೆ ಸಂಪರ್ಕಿಸುವ ರಸ್ತೆಯು ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಸ್ಥಳೀಯರಿಗೆ ಸಮಸ್ಯೆಯ ಗೂಡಾಗಿ ಮಾರ್ಪಟ್ಟಿದೆ.ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಪರಿಸರ ಧೂಳುಮಯ ಆಗುತ್ತಿದ್ದು ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಈ ಭಾಗದ ವ್ಯಾಪಾರ ಮಳಿಗೆಗಳಿಗೆ ಬರುವ ಗ್ರಾಹಕರ ವಾಹನಗಳನ್ನು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡುವುದರಿಂದ ಬೇರೆ ವಾಹನಗಳಿಗೆ ಸಂಚರಿಸಲು ಕಷ್ಟ ಸಾಧ್ಯವಾಗುತ್ತಿದೆ.ಇತರ ವಾಹನಗಳು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ತಡೆಗೋಡೆಯ ಬದಿಯಲ್ಲಿ ಹಾದು ಹೋಗಬೇಕಾಗುತ್ತಿದ್ದು ಈ ತಡೆಗೋಡೆಯು ಬಿರುಕುಗಳು ಬಿಟ್ಟು ಶಿಥಿಲಾವಸ್ಥೆಯಲ್ಲಿ ನಿಂತಿದ್ದು ಇಂದೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿ ಕಂಡು ಬರುತ್ತಿದೆ. ಕೆಳಭಾಗದಲ್ಲಿ ವಾಹನಗಳು ಚಲಿಸಿದರೆ ಅದರ ಕಂಪನದಿಂದ ತಡೆಗೋಡೆ ಬೀಳುವ ಪರಿಸ್ಥಿತಿಯಲ್ಲಿ ಅಪಾಯಕಾರಿಯಾಗಿದೆ.

ಪ್ರತಿನಿತ್ಯ ಇದೇ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು,ನೂರಾರು ಸಾರ್ವಜನಿಕರು ನಡೆದಾಡುತ್ತಿದ್ದು ಮುಂದೊಂದು ದಿನ ಅನಾಹುತಗಳು ಉಂಟಾಗುವ ಸಂಭವವಿದ್ದು ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.