ಅಂಗವಿಕಲನ ಕೂಗಿಗೆ ಸ್ಪಂಧಿಸಿದ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು

0

5 ತಿಂಗಳಿನಿಂದ ಅಂಗವಿಕಲ ವೇತನ ಬಾರದೇ, ಚಿಕಿತ್ಸೆಗೆ ಕಷ್ಟಪಡುತ್ತಿದ್ದ ಬಗ್ಗೆ ಸುದ್ದಿ ವೆಬ್ ಸೈಟ್ ನ್ಯೂಸ್ ನಲ್ಲಿ ಪ್ರಸಾರವಾದ ವರದಿಗೆ ಅಧಿಕಾರಿಗಳು ತಕ್ಷಣ ಸ್ಪಂಧಿಸಿದ ಘಟನೆ ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಮುಂಡೋಕಜೆ ಆನಂದ ನಾಯ್ಕರವರಿಗೆ ಕಳೆದ 5 ತಿಂಗಳಿನಿಂದ ಅಂಗವಿಕಲ ವೇತನ ಬಂದಿರಲಿಲ್ಲ. ಹೀಗಾಗಿ ಅವರಿಗೆ ಚಿಕಿತ್ಸೆಗೂ ತೆರಳಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸುದ್ದಿ ವೆಬ್ ಸೈಟ್‌ನಲ್ಲಿ ನಿನ್ನೆ(ಎ.5) ವರದಿ ಪ್ರಕಟಗೊಂಡಿತ್ತು.

ಇದಕ್ಕೆ ಸ್ಪಂದಿಸಿದ ಇಲಾಖೆ‌ ಮತ್ತು ಅಧಿಕಾರಿಗಳು ತಾಂತ್ರಿಕ ಅಡಚಣೆಯನ್ನು ಸರಿಪಡಿಸಿ ತಕ್ಷಣ 5 ತಿಂಗಳ ವೇತನ ಒದಗುವಂತೆ ಮಾಡಿದ್ದಾರೆ. ಇದೀಗ 5 ತಿಂಗಳ ವೇತನ ಆನಂದ ನಾಯ್ಕರವರಿಗೆ ಸಿಕ್ಕಿರುವುದಾಗಿ ತಿಳಿದು ಬಂದಿದೆ.