ಎ.16 ರಿಂದ ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಪುನರ್ ಪ್ರತಿಷ್ಠಾ ಕಾರ್ಯಕ್ರಮ

0

ಸುಳ್ಯ ಬೀರಮಂಗಲ ಬಂಗ್ಲೆಗುಡ್ಡೆ ಯಲ್ಲಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಮೊಗೇರ ದೈವಗಳು, ಶ್ರೀ ತನ್ನಿಮಾನಿಗ,ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಎ.16 ರಿಂದ ಎ.18 ರವರೆಗೆ ನಡೆಯಲಿದೆ.


ಎ.16ರಂದು ಸಂಜೆ ಕೆ ಹೆಚ್ ಪದ್ಮನಾಭ ಆಚಾರ್ಯ ಕಡೆಪಾಲ ರವರಿಂದ ಕುಟ್ಟಿಪೂಜೆ ರಾತ್ರಿ ಅನ್ನಸಂತರ್ಪಣೆ, ಎ.17 ಬಹ್ಮಶ್ರೀ ವೇದಮೂರ್ತಿ ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ಅಗಮನ,ಪ್ರಾರ್ಥನೆ, ಸ್ಥಳಸುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತುಬಲಿ,ದಿಕ್ಪಾಲ ಬಲಿ,ಬಿಂಬಾದಿವಾಸ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಎ.18 ಗಣಹೋಮ,ಪ್ರತಿಷ್ಠೆ ಕಲಶಾಭಿಷೇಕ,ಚೌಡಿ ಚಾಮುಂಡೇಶ್ವರಿ ಅರಾಧಕ ಬಾಬು ಧರ್ಮಶ್ರಿಗಳ ನೇತ್ರತ್ವದಲ್ಲಿ ತಂಬಿಲ,ಮಹಾಪೂಜೆ,ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.