ಬೇಸಿಗೆಯಲ್ಲಿ ಪೈಪ್ ಲೈನ್ ಅಳವಡಿಕೆಯಿಂದ ನೀರು ಸರಬರಾಜಿಗೆ ತೊಂದರೆ : ಕಾಮಗಾರಿ ಸ್ಥಗಿತಗೊಳಿಸಲು ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿ

0

ಒಂದು ತಿಂಗಳ ನಂತರ ಕೆಲಸ ಪುನರಾರಂಭಿಸಿ

ಸುಳ್ಯ ನಗರದಲ್ಲಿ ನೀರು ಸರಬರಾಜು ಯೋಜನೆಗೆ ರಸ್ತೆ ಅಗೆದು ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಇದು ಸೂಕ್ತ ಸಮಯವಲ್ಲ. ಬಿರುಬೇಸಗೆಯಲ್ಲಿ‌ ವಾರ್ಡ್ ವ್ಯಾಪ್ತಿಯಲ್ಲಿ ನೀರು‌ ಸರಬರಾಜಿಗೆ ತೊಂದರೆಯಾಗುತ್ತಿದ್ದು ಕಾಮಗಾರಿ ತಕ್ಷಣ ನಿಲ್ಲಿಸಿ, ಒಂದು ತಿಂಗಳ ಬಳಿಕ ಕಾಮಗಾರಿ ಪುನರಾರಂಭಿಸಬೇಕು ಎಂದು ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ‌ಮನವಿ ಮಾಡಿಕೊಂಡಿದ್ದಾರೆ.

ಈಗ ಬೇಸಿಗೆ ಕಾಲ. ವಾರ್ಡ್ ಗಳಿಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದೇ ಸಂದರ್ಭ ಹೊಸ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆಯುವಾಗ ಹಳೆ ಪೈಪ್ ಗಳು ತುಂಡಾಗಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಜನರಿಗೆ ನೀರೇ ಸಿಗದ ಸ್ಥಿತಿ ಎದುರಾಗಿದೆ. ಆದ್ದರಿಂದ ಈಗ ಜನರಿಗೆ ನೀರು ಕೊಡುವುದು ಅತ್ಯಗತ್ಯ ವಾಗಿದ್ದು ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು‌ ಮನವಿಯಲ್ಲಿ ಕೇಳಿಕೊಂಡಿದ್ದಾರೆ.