ಏ.28 ರಂದು ನಾಲ್ಕೂರು ಗ್ರಾಮದ ಉಜಿರಡ್ಕ ಕೊರಗಜ್ಜ ಕ್ಷೇತ್ರದಲ್ಲಿ ನರ್ತನ ಸೇವೆ

0

ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜ, ಕಲ್ಲುರ್ಟಿ, ಮಂತ್ರವಾದಿ ಗುಳಿಗನ ನರ್ತನ ಸೇವೆ ಏ‌‌.28 ರಂದು ನಡೆಯಲಿದೆ.

ಏ.28 ರ ಸಂಜೆ ಗಂಟೆ 4:00 ರಿಂದ 5:30ರ ತನಕ ಶ್ರೀ ಮಾತಾ ಅಮೃತ ಕುಟುಂಬ ಏನೆಕಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಸಂಜೆ ಗಂಟೆ 6.00ಕ್ಕೆ ದೈವಗಳ ಭಂಡಾರ ತೆಗೆದು ಕಲ್ಲುರ್ಟಿ ಮತ್ತು ಮಂತ್ರವಾದಿ ಗುಳಿಗ ದೈವದ ನರ್ತನ ಸೇವೆ ನಡೆಯಲಿದೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬಳಿಕ ರಾತ್ರಿ ಗಂಟೆ 10.00ಕ್ಕೆ ಸ್ವಾಮಿ ಕೊರಗಜ್ಜ ದೈವದ ನರ್ತನ ಸೇವೆ ನಡೆಯಲಿದೆ.