ಕನಕಮಜಲು: ದಿ. ಲೀಲಾವತಿ ಗುಡ್ಡಪ್ಪ ಗೌಡ ನರಿಯೂರು ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ

0

ಕನಕಮಜಲು ಗ್ರಾಮದ ದಿ. ಪಟೇಲ್ ನರಿಯೂರು ಗುಡ್ಡಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಲೀಲಾವತಿ ನರಿಯೂರು ಅವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸಭಾಂಗಣದಲ್ಲಿ ಮೇ.11ರಂದು ನಡೆಯಿತು.

ನಿವೃತ್ತ ಶಿಕ್ಷಕ ಸೀತಾರಾಮ ಗೌಡ ಬುಡ್ಲೆಗುತ್ತು ಅವರು ಶ್ರೀಮತಿ ಲೀಲಾವತಿ ಗುಡ್ಡಪ್ಪ ಗೌಡರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.

ದಿ. ಲೀಲಾವತಿ ಗುಡ್ಡಪ್ಪ ಗೌಡರ ಮನೆಯವರ ಪರವಾಗಿ ಅವರ ಮೊಮ್ಮಗಳು ಕು. ಅರ್ಚನ ಅವರು ಮಾತನಾಡಿ, ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ದಿ. ಲೀಲಾವತಿ ಗುಡ್ಡಪ್ಪ ಗೌಡರ ಪುತ್ರರಾದ ರಾಮಚಂದ್ರ ಗೌಡ ನರಿಯೂರು, ಕೇಶವಾನಂದ ನರಿಯೂರು, ಉಮೇಶ್ಚಂದ್ರ ನರಿಯೂರು, ಎನ್.ಜಿ. ಚಂದ್ರಶೇಖರ ನರಿಯೂರು, ಪುತ್ರಿಯರಾದ ಶ್ರೀಮತಿ ತಿಲೋತ್ತಮೆ ಗಟ್ಟಿಗಾರು, ಶ್ರೀಮತಿ ಚಂದ್ರಕಲಾ ಎಣ್ಣೆಮಜಲು, ಶ್ರೀಮತಿ ವಿಜಯಕುಮಾರಿ ಏಣಾಜೆ, ಶ್ರೀಮತಿ ಪುಷ್ಪಾವತಿ, ಸೊಸೆಯಂದಿರಾದ ಶ್ರೀಮತಿ ಮಾಲಿನಿ ನರಿಯೂರು, ಶ್ರೀಮತಿ ವಸಂತಿ ನರಿಯೂರು, ಶ್ರೀಮತಿ ಹರಿಣಾಕ್ಷಿ ನರಿಯೂರು, ಅಳಿಯಂದಿರಾದ ರಾಮಚಂದ್ರ ಗಟ್ಟಿಗಾರು, ನಿಶಾಂತ್ ಮಣಿಯಾನಮನೆ, ಸೀತಾರಾಮ ಗೌಡ ಎಣ್ಣೆಮಜಲು, ಭಾಸ್ಕರ ಗೌಡ ಏಣಾಜೆ, ಸುರೇಶ್ ಗೌಡ ಬಿದಿರಾಡಿ, ಸೇರಿದಂತೆ ಮೃತರ ಮೊಮ್ಮಕ್ಕಳು, ಮರಿಮಕ್ಕಳು , ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.