ಮೊಗರ್ಪಣೆ :ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಆಂಡ್ ನೇರ್ಚೆ ಹಾಗೂ ನೂತನ ವರ್ಷದ ದರ್ಸ್ ಉದ್ಘಾಟನೆ

0

ಮೊಗರ್ಪಣೆ ಮಾಂಬ್ಳಿ ತಂಙಳ್ ರವರ ಹೆಸರಿನಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಆಂಡ್ ನೇರ್ಚೆ ಕಾರ್ಯಕ್ರಮ ಮೇ 10 ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಿತು.


ಸಂಜೆ 5 ಗಂಟೆಗೆ ಮಖಾಂ ಝಿಯಾರತ್ ನೊಂದಿಗೆ ಸ್ಥಳೀಯ ಮಸೀದಿಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸಂಜೆ 7 ಗಂಟೆಗೆ ದಿಖ್ರ್ ಹಲ್ಕಾ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು.

ರಾತ್ರಿ ಆಂಡ್ ನೇರ್ಚೆ ಪ್ರಯುಕ್ತ ನಡೆದ ಮುಖ್ಯ ಪ್ರಬಾಷಣಕ್ಕೆ ಖ್ಯಾತ ವಾಗ್ಮಿ ಧಾರ್ಮಿಕ ಪಂಡಿತ ಹುಸೈನ್ ಸಅದಿ ಕೆ.ಸಿ. ರೋಡ್ ಉಸ್ತಾದ್ ರವರು ಭಾಗವಹಿಸಿ ಹಿತ ವಚನವನ್ನು ನೀಡಿದರು.ಇದೇ ಸಂದರ್ಭದಲ್ಲಿ ಮೊಗರ್ಪಣೆ ಮಸೀದಿಯಲ್ಲಿ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ವಿದ್ಯಾರ್ಥಿಗಳ ದರ್ಸ್ ತರಬೇತಿಗೆ ಹುಸೈನ್ ಸಅದಿ ಯವರು ಪಠಣವನ್ನು ಹೇಳಿ ಚಾಲನೆ ನೀಡಿದರು.

ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಇದರ ಸದರ್ ಮುಅಲ್ಲಿಂ ಸ್ವಾಗತಿಸಿ ಹಾಫಿಲ್ ಸೌಕತ್ ಅಲಿ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಯ್ಯಿದ್ ಜೈನುಲ್ ಆಬಿದೀನ್ ತಂಗಳ್ ಜಯನಗರ,ಎಚ್ ಐ ಜೆ ಕಮಿಟಿಯ ಪದಾಧಿಕಾರಿಗಳು ಸದಸ್ಯರು, ಮದರಸ ಅಧ್ಯಾಪಕರು,ಸ್ಥಳೀಯ ಜಮಾಅತರು ಉಪಸ್ಥಿತರಿದ್ದರು.