MUS ಸುಳ್ಯ ತಾಲೂಕು ನೂತನ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಸಯ್ಯಿದ್ ತ್ವಾಹಿರ್ ಸಅದಿ ತಙಳ್ ಆಯ್ಕೆ.

0

ಕಾಸರಗೋಡು ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಪೂರ್ವ ವಿಧ್ಯಾರ್ಥಿ ಸಂಘಟನೆಯಾದ ಎಂ.ಯು.ಎಸ್ ನ ಸುಳ್ಯ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆಯು ಅಬ್ದುಲ್ಲಾಹಿ ಸಅದಿ ಮೇನಾಲ ಇವರ ಅಧ್ಯಕ್ಷತೆಯಲ್ಲಿ ಮೇ 24 ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.

ಕೇಂದ್ರ ಸಮಿತಿ ಕಾರ್ಯದರ್ಶಿ ಮುನೀರ್ ಅಹ್ಮದ್ ಸಅದಿ ನೆಲ್ಲಿಕ್ಕುನ್ನ್ ಸಭೆಯನ್ನು ಉದ್ಘಾಟಿಸಿ ವಿಷಯಾವತರಣೆ ಮಾಡಿ ಮಾತನಾಡಿನದರು.

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ ಸಯ್ಯಿದ್ ತ್ವಾಹಿರ್ ಸಅದಿ ತಙಳ್, ಉಪಾಧ್ಯಕ್ಷರುಗಳಾಗಿ ಎ.ಬಿ‌.ಅಶ್ರಫ್ ಸಅದಿ ಅಡ್ಕ, ಅಬ್ದುರ್ರಹ್ಮಾನ್ ಸ ಅದಿ ಕನಕಮಜಲು, ಪ್ರ.ಕಾರ್ಯದರ್ಶಿ ಸಿದ್ದೀಖ್ ಸಅದಿ ಎಣ್ಮೂರು, ಜೊ.ಕಾರ್ಯದರ್ಶಿ ರಿಯಾನ್ ಸಅದಿ ಬೆಳ್ಳಾರೆ, ಹಸನ್ ಸಅದಿ ಪೈಂಬೆಚ್ಚಾಲು, ಕೋಶಾಧಿಕಾರಿ ನೌಫಲ್ ಸಅದಿ ಜಾಲ್ಸೂರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಬೈದ್ ಸಅದಿ ಅಡ್ಕಾರ್, ಬಶೀರ್ ಸಅದಿ ಎಣ್ಮೂರು, ತಾಜುದ್ದೀನ್ ಸಅದಿ ಅಡ್ಕ. ಶಮ್ಮಾಸ್ ಸಅದಿ ಪೆರುವಾಜೆ, ಅಝೀಝ್ ಸಅದಿ ಕರಿಂಬಿಲ, ಮುಖ್ತಾರ್ ಸಅದಿ ಮೇನಾಲ, ಅನ್ಸಾರ್ ಸಅದಿ ತಂಬಿನಮಕ್ಕಿ ಇವರನ್ನು ಆಯ್ಕೆ ಮಾಡಲಾಯಿತು.


ನೌಫಲ್ ಸಅದಿ ಸ್ವಾಗತಿಸಿ, ಸಿದ್ದೀಖ್ ಸಅದಿ ಧನ್ಯವಾದವಿತ್ತರು.