ನೆಲ್ಲೂರು ಕೆಮ್ರಾಜೆ : ಹಿರಿಯರ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಬಂದ ಲಕ್ಷ್ಮಣ ಬೊಳ್ಳಾಜೆ ಯವರಿಗೆ ಊರವರಿಂದ ಅದ್ದೂರಿ ಸ್ವಾಗತ

0

ಹೈದಾರಬಾದ್ ನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ‌ ಬೊಳ್ಳಾಜೆ ಲಕ್ಷ್ಮಣ ಮಣಿಯಾಣಿಯವರು 4 ಸ್ಪರ್ಧೆಗಳಲ್ಲಿ ವಿಜಯಿಯಾಗಿ ಚಾಂಪಿಯನ್ ಆಗಿ ಇಂದು ಊರಿಗೆ ಮರಳಿದಾಗ ಅವರಿಗೆ ಅದ್ದೂರಿಯ ಸ್ವಾಗತ ಮಾಡಲಾಯಿತು.

ಲಕ್ಷ್ಮಣ ಬೊಳ್ಳಾಜೆಯವರು 100 ಮೀ ಓಟದಲ್ಲಿ ಪ್ರಥಮ, 400 ಮೀ. ಓಟದಲ್ಲಿ ದ್ವಿತೀಯ, 3,500 ಮೀ. ಓಟದಲ್ಲಿ ದ್ವಿತೀಯ, ತ್ರಿಬಲ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಹೈದಾರಬಾದ್ ನಿಂದ ಇಂದು ಊರಿಗೆ ಮರಳುತ್ತಿದ್ದಾಗ ದುಗ್ಗಲಡ್ಕದಲ್ಲಿ ಅವರನ್ನು ಸ್ವಾಗತಿಸಿ, ಮನೆಗೆ ವಾಹನದ ಜಾಥಾದ ಮೂಲಕ‌ ಕರೆತರಲಾಯಿತು. ‌

ಈ ಸಂದರ್ಭದಲ್ಲಿ ದಿನೇಶ್ ಬೊಮ್ಮಾರು, ಕೇಶವ ಬಾಳೆಗುಂಡಿ, ಶಶಿಕಾಂತ ಗುಳಿಗಮೂಲೆ, ಗಂಗಾಧರ ಬೊಳ್ಳಾಜೆ, ಅಶೋಕ ಕಿಲಾರ್ಕಜೆ, ಬಾಲು ನಾಯ್ಕ ಕೊರತ್ತೋಡಿ, ಮನೋಹರ ರೈ, ರವಿಪ್ರಕಾಶ್ ಕೊರತ್ತೋಡಿ, ರಾಜೇಶ್ ರೆಂಜಾಳ, ಜಯರಾಮ ದೇಶೆಕೋಡಿ, ಚಂದ್ರಶೇಖರ ಹೈದಂಗೂರು ಮತ್ತಿತರರಿದ್ದರು.