ವಿಧಾನ ಪರಿಷತ್ ಚುನಾವಣೆ : ಬೆಳ್ಳಾರೆ ಕೆಪಿಎಸ್ ನಲ್ಲಿ ಎನ್.ಡಿ.ಎ ಅಭ್ಯರ್ಥಿಗಳ ಪರ ಮತ ಯಾಚನೆ

0

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಜೂ.03 ರಂದು ನಡೆಯಲಿದ್ದು ಇಂದು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಅಭ್ಯರ್ಥಿಗಳಾದ ಧನಂಜಯ ಸರ್ಜಿ ,ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರ ಪರ ಮತ ಯಾಚನೆ ಮಾಡಲಾಯಿತು.


ಕಾಲೇಜಿನ ಪ್ರಾಂಶುಪಾಲ ಜನಾರ್ದನ, ಉಪಪ್ರಾಂಶುಪಾಲರಾದ ಉಮಾ ಕುಮಾರಿಯವರಿಗೆ ಶಾಸಕಿ ಭಾಗೀರಥಿ ಮುರುಳ್ಯರವರು ಮನವಿಯನ್ನು ನೀಡಿ ಮತ ಯಾಚನೆ ಮಾಡಿದರು.


ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ,ಪದವೀಧರ ಕ್ಷೇತ್ರದ ಸಂಚಾಲಕ ವಸಂತ ನಡುಬೈಲು, ಶಿಕ್ಷಕರ ಕ್ಷೇತ್ರದ ಸಂಚಾಲಕ ಶ್ರೀನಾಥ್ ರೈ ಬಾಳಿಲ, ಕೆಪಿಎಸ್ ಕಟ್ಟಡ ಸಮಿತಿ ಅಧ್ಯಕ್ಷ ಹರ್ಷ ಜೆ, ಪದ್ಮನಾಭ ಬೀಡು,ಎ.ಪಿ.ಎಂ‌.ಸಿ ಮಾಜಿ ಉಪಾಧ್ಯಕ್ಷ
ಸಂತೋಷ್ ಜಾಕೆ, ಜಿಲ್ಲಾ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯ ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.