ಹರಿಹರ : ನಾಗರ ಹಾವು ಕಡಿದು ವೃದ್ಧೆ ಸಾವು

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿ ದೇವಮ್ಮ ಎಂಬ ವರು ತಮ್ಮ ಮನೆಯ ಸಮೀಪ ಕೊಟ್ಟಿಗೆಯ ಸುತ್ತ ಸ್ವಚ್ಚಗೊಳಿಸುವ ಸಂದರ್ಭ ಕೋಳಿ ಕಾಪುವನ್ನು ಪರಿಶೀಲಿಸಲು ಕೈ ಹಾಕಿದಾಗ ನಾಗರ ಹಾವು ಕಡಿದು ಸಾವನ್ನಪ್ಪಿದ ಘಟನೆ ಇಂದು ವರದಿಯಾಗಿದೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಕೈಗೆ ನಾಗರ ಹಾವು ಕಡಿದಿರುವುದು ಗೊತ್ತಾಗಿದ್ದು ತಕ್ಷಣವೇ ಅವರನ್ನು ಹಳ್ಳಿ ಮದ್ದಿಗೆ ಕರೆದೊಯ್ದು ಅಲ್ಲಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತಿತ್ತು. ಆಸ್ಪತ್ರೆಗೆ ಸಾಗಿದುವ ದಾರಿ ಮದ್ಯೆ ಕೊನೆಯುಸಿರೆಳೆದರೆನ್ನಲಾಗಿದೆ. ಹಾವು ಕಡಿತದ ವೇಳೆ ಮನೆಯಲ್ಲಿ ಮೊಮ್ಮಗಳು ಒಬ್ಬರಿದ್ದರೆನ್ನಲಾಗಿದೆ.


ಮೃತರು ಪುತ್ರಿಯರಾದ ಸಾವಿತ್ರಿ, ಯಮುನ, ಮೊಮ್ಮಕ್ಕಳು ಹಾಗು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.