ಆಲೆಟ್ಟಿ ಸದಾಶಿವ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ- ಏಕದಶಾರುದ್ರಾಭಿಷೇಕ ಸೇವೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಜೂ.5 ರಂದು ನಡೆಯಿತು.

ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ನಿತ್ಯ ಪೂಜೆಯಾಗಿ ಪೂರ್ವಾಹ್ನ ಗಣಪತಿ ಹವನವು ನೆರವೇರಿತು.

ಬಳಿಕ ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮವು ನಡೆಯಿತು. ಅರಂಬೂರು ಭಾರದ್ವಾಜ್ ಆಶ್ರಮದ‌ ವಿದ್ಯಾರ್ಥಿಗಳಿಂದ ವೆಂಕಟೇಶ್ ಶಾಸ್ತ್ರೀಯ ವರ ನೇತೃತ್ವದಲ್ಲಿ ವೇದ ಪಾರಾಯಣ ನಡೆದು ಮಧ್ಯಾಹ್ನ ವಿಶೇಷವಾಗಿ ದೇವರಿಗೆ ಏಕದಶಾ ರುದ್ರಾಭಿಷೇಕವಾಗಿ ಮಹಾಪೂಜೆಯು ನಡೆಯಿತು.
ಕುಂಟಾರುತಂತ್ರಿಯವರಿಂದ ಸಾಮೂಹಿಕ ಪ್ರಾರ್ಥನೆ ಯಾಗಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ,
ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ,
ಶ್ರೀಮತಿ ಶಾಂತಾ ಬೈಪಡಿತ್ತಾಯ,
ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ,ಅರ್ಚಕ ರಘುರಾಮಕಡಂಬಳಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಸೇ.ಸ.ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು,
ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ,ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಸದಸ್ಯರಾದ ಅಚ್ಚುತ ಮಣಿಯಾಣಿ ಆಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ, ಸತೀಶ್ ಕುಂಭಕೋಡು, ಮಮತಾ ನಾರ್ಕೋಡು, ನಳಿನಿ ರೈ ಆಲೆಟ್ಟಿ, ಭಜನಾ ಸಂಘದ ನಿರ್ದೇಶಕ ಸುದಾಮ ಆಲೆಟ್ಟಿ,
ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಸದಸ್ಯಲಕ್ಷ್ಮಣ ಗೌಡ ಪರಿವಾರ, ಶ್ರೀನಾಥ್ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ಪುರುಷೋತ್ತಮ ದೋಣಿಮೂಲೆ, ದೇವಯ್ಯ ಗೌಡ ಮೊರಂಗಲ್ಲು ಹಾಗೂ ಗ್ರಾಮಸ್ಥರು ಭಾಗವಹಿಸಿದರು.