ಐ.ಐ.ಟಿ ಗೆ ಪ್ರವೇಶಾವಕಾಶ ಪಡೆದ ಅಮರ ಪಡ್ನೂರು ಗ್ರಾಮದ ಸಾತ್ವಿಕ್ ಎಚ್. ಎಸ್.

0

ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ, ಅಮರ ಪಡ್ನೂರು ಗ್ರಾಮದ ಹಾಸನಡ್ಕದ ಸಾತ್ವಿಕ್ ಎಚ್ ಎಸ್ ಐ.ಐ.ಟಿ ಗೆ ಪ್ತವೇಶಾವಕಾಶ ಪಡೆದಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ದ್ವಿತೀಯ ಪಿ.ಯು ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದಿದ್ದ ಇವರು ಜೆ.ಇ.ಇ ಮೈನ್ಸ್ ‌ಪರೀಕ್ಷೆ ಬರೆದು, ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದು ಅದನ್ನು ಬರೆದು ಅದರಲ್ಲಿ ಪಡೆದ ರ್ಯಾಂಕ್ ಆಧಾರದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶಾವಕಾಶ ಪಡೆದಿದ್ದಾರೆ.
ಇವರು ಡಾ. ಶಶಿಧರ್ ಹಾಸನಡ್ಕ, ಡಾ. ಅನುಪಮಾ ದಂಪತಿಗಳ ಪುತ್ರ.