ಬಿಂದು ಜ್ಯುವೆಲ್ಲರಿ ಗ್ರಾಹಕರಿಗೆ ಆಯೋಜಿಸಿದ ಅದೃಷ್ಟ ಯೋಜನೆ ಡ್ರಾ ಫಲಿತಾಂಶ

0

ಉಳುವಾರಿನ ಬಾಲಕಿಯವರಿಗೊಲಿದ ಡೈಮಂಡ್ ಉಂಗುರ

ಸುಳ್ಯದಲ್ಲಿ ಇತ್ತೀಚಿಗೆ ಶುಭಾರಂಭಗೊಂಡ ಬಿಂದು ಜ್ಯುವೆಲ್ಲರಿಯಲ್ಲಿ ಸಂಸ್ಥೆಯ ಉದ್ಘಾಟನೆ ಸಮಾರಂಭಕ್ಕೆ ಅಗಮಿಸಿದ ಗ್ರಾಹಕರಿಗೂ ಹಾಗೂ ಸಂಸ್ಥೆಯಿಂದ ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಕೂಪನ್ ನಿಡಿದ್ದು ಅದರಲ್ಲಿ ತಮ್ಮ ವಿಳಾಸವನ್ನು ಬರೆದು ಹಾಕಲು ಅವಕಾಶ ಕಲ್ಪಿಸಲಾಗಿತ್ತು.
ಅದರ ಡ್ರಾ ಫಲಿತಾಂಶದ ಅದೃಷ್ಟ ಗ್ರಾಹಕರ ಆಯ್ಕೆ ಪ್ರಕ್ರಿಯೆ ಜೂ.21 ರಂದು ಸುಳ್ಯದ ಮಳಿಗೆಯಲ್ಲಿ ನಡೆಯಿತು.
ಅದೃಷ್ಟ ಗ್ರಾಹಕರನ್ನು ಚೀಟಿ ಎತ್ತುವ ಮೂಲಕ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ನೆರವೇರಿಸಿ ಕೊಟ್ಟರು.


ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಮಾಲಕರಾದ ಅಬಿಲಾಷ್ ಮತ್ತು ಡಾ.ಅಜಿತೇಶ್ ರವರು ಸ್ವಾಗತಿಸಿದರು.

ಡೈಮಂಡ್ ಉಂಗುರ ವಿಜೇತರು


ಅದೃಷ್ಟ ಗ್ರಾಹಕರಾಗಿ ಅರಂತೋಡು ಉಳುವಾರು ಬಾಲಕಿ ಎಂಬವರು ಆಯ್ಕೆಯಾಗಿದ್ದಾರೆ