ವಿದೇಶಕ್ಕೆ ಹೊರಟಿರುವ ರಾಮಕೃಷ್ಣ ಆಲಂಕಳ್ಯ ದಂಪತಿಯನ್ನು ಬೀಳ್ಕೊಟ್ಟ ಸ್ನೇಹಿತರು

0

ಯುನೈಟೆಡ್ ಕಿಂಗ್ ಡಂ(ಇಂಗ್ಲೆಂಡ್)ನಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿ ಉದ್ಯೋಗಕ್ಕೆ ಸೇರುತ್ತಿರುವ ತಮ್ಮ ಪುತ್ರನ ಬಳಿ ತೆರಳುತ್ತಿರುವ ಉದ್ಯಮಿ ರಾಮಕೃಷ್ಣ ಆಲಂಕಳ್ಯ ಹಾಗೂ ಅವರ ಪತ್ನಿ, ಸರಕಾರಿ ಆಸ್ಪತ್ರೆಯ ಹಿರಿಯ ಸುಶ್ರೂಷಕಿ ಶ್ರೀಮತಿ ಹರಿಣಾಕ್ಷಿಯವರನ್ನು ಸ್ನೇಹಿತರ ವತಿಯಿಂದ ಬೀಳ್ಕೊಡುವ ಕಾರ್ಯಕ್ರಮ ಜೂನ್ ೨೧ರಂದು ಹಳೆಗೇಟು ಸಂತೃಪ್ತಿ ರೆಸ್ಟೋರೆಂಟ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸ್ನೇಹಿತರ ಪರವಾಗಿ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಅಭಿನಂದಿಸಲಾಯಿತಲ್ಲದೆ, ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ವಸಂತ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಐ.ಬಿ.ಚಂದ್ರಶೇಖರ ಜಟ್ಟಿಪಳ್ಳ, ನಿವೃತ್ತ ಶಿಕ್ಷಕ ಶ್ರೀನಿವಾಸ್ ರಾವ್ ಹಳೆಗೇಟು ಮೊದಲಾದವರು ದಂಪತಿಯನ್ನು ಅಭಿನಂದಿಸಿ ಮಾತನಾಡಿದರು.
ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಎಂಜಿಎಂ ಶಾಲಾ ಸಂಚಾಲಕ ದೊಡ್ಡಣ್ಣ ಬರಮೇಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರಜತ್ ಅಡ್ಕಾರ್ ಶುಭಹಾರೈಸಿ ವಂದಿಸಿದರು.
ಸುಮಾರು ೩೦ಕ್ಕೂ ಹೆಚ್ಚು ಸ್ನೇಹಿತರು, ಸಮಾಜದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.