ಕೊಡಗು ಸಂಪಾಜೆ: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಗದು ಗುಮಾಸ್ತ ಪ್ರಕಾಶ್ ರಾವ್ ಅವರಿಗೆ ಬೀಳ್ಕೊಡುಗೆ

0

ಕೊಡಗು ಸಂಪಾಜೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ಕಛೇರಿಯಲ್ಲಿ ನಗದುಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ರಾವ್ ಅವರಿಗೆ ಕುಶಾಲನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ವರ್ಗಾವಣೆಯಾಗಿದ್ದು, ಕೊ.ಸಂಪಾಜೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಅವರನ್ನು ಜೂ.25ರಂದು ಬೀಳ್ಕೊಡಲಾಯಿತು.

ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ ಅವರು ಪ್ರಕಾಶ್ ರಾವ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಿ, ಬೀಳ್ಕೊಟ್ಟರು. ಪ್ರಕಾಶ್ ರಾವ್ ಅವರು ಮೂಲತಃ ಪುತ್ತೂರಿನವರಾಗಿದ್ದು, ಕಳೆದ ಎಂಟು ವರ್ಷಗಳಿಂದ ಸಂಪಾಜೆ ಶಾಖಾ ಕಛೇರಿಯಲ್ಲಿ ನಗದು ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಸಂಪಾಜೆಯ ಶಾಖಾ ವ್ಯವಸ್ಥಾಪಕ ಜಯಪ್ರಕಾಶ್, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ, ಸ್ಥಳೀಯರಾದ ಶರತ್ ಕಾಸ್ಪಾಡಿ, ಸುದ್ದಿ ಪ್ರತಿನಿಧಿ ಗೋಪಾಲ ಸಂಪಾಜೆ, ರಿತಿನ್ ಡೆಮ್ಮಲೆ, ಲೀಲಾಪ್ರಸಾದ್ ಅಚ್ಚಂದಿರ, ಅಜಿತ್ ದೇವರಗುಂಡ, ಶಿವಪ್ರಸಾದ್ ಗಬ್ಬಲಡ್ಕ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.