ವಿಶೇಷ ಚೇತನ ಕಾರ್ಯಕರ್ತರ ರಾಜ್ಯ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ನಾಯಕ್ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ತಿರುಮಲೇಶ್ವರ ಬಿ.ಎಂ. ಪೆರಾಜೆ ಆಯ್ಕೆ

0

ರಾಜ್ಯ ವಿಶೇಷ ಚೇತನ ಕಾರ್ಯಕರ್ತರ ಯುಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ ರಾಜ್ಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಪ್ರವೀಣ ನಾಯಕ್ ಸುಳ್ಯ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪೆರಾಜೆಯ ತಿರುಮಲೇಶ್ವರ ಬಿ.ಎಂ. ಆಯ್ಕೆಯಾಗಿದ್ದಾರೆ.
ಪ್ರವೀಣ್ ನಾಕ್‌ರವರು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ವಿಕಲಚೇತನರ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಕಲಚೇತನರ ಕಾರ್ಯಕರ್ತರ ರಾಜ್ಯ ಒಕ್ಕೂಟದ ನಿರ್ದೇಶಕರಾಗಿದ್ದಾರೆ.
ತಿರುಮಲೇಶ್ವರರು ಪ್ರಸ್ತುತ ಶ್ರೀ ಶಾಸ್ತಾವು ವಿಶೇಷ ಚೇತನ ಸಂಘದ ಅಧ್ಯಕ್ಷರಾಗಿದ್ದು, ೩೮೧೮೭ನೇ ವಿಶೇಷ ಚೇತನರ ವಿವಿದ್ದೋzಶ ಸೆವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ವಿಶೇಷ ಚೇತನರ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪೆರಾಜೆ ಗ್ರಾಮ ಪಂಚಾಯತ್‌ನ ವಿಆರ್‌ಡಬ್ಲ್ಯೂ ಆಗಿದ್ದಾರೆ. ಕೊಡಗು ಜಿಲ್ಲಾ ಯುಆರ್‌ಡಬ್ಲ್ಯೂ, ವಿಆರ್‌ಡಬ್ಲ್ಯೂ ಸಮಿತಿಯ ಜಿಲ್ಲಾಧ್ಯಕ್ಷರಾಗಿರುವ ಇವರು ಮಡಿಕೇರಿ ತಾಲೂಕು ವಿಶೇಷ ಚೇತನರ ರಕ್ಷಣಾ ಸಮಿತಿಯ ಸದಸ್ಯರಾಗಿದ್ದಾರೆ.