ಗುತ್ತಿಗಾರು ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

0

ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಪದಗ್ರಹಣ ಸಮಾರಂಭವು ಜು.2 ರಂದು ಗುತ್ತಿಗಾರಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿ
ಡಿಸ್ಟಿಕ್ಟ್ 317 ಡಿ ಇದರ ದ್ವಿತೀಯ ಉಪ ರಾಜ್ಯಪಾಲ ಎಚ್.ಎಂ ತಾರಾನಾಥ ಪದಗ್ರಹಣ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ, ವಲಯಾಧ್ಯಕ್ಷೆ ರೂಪಶ್ರೀ ರೈ ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಹಾಲಿ ಅಧ್ಯಕ್ಷ ಜಯರಾಮ ಕಡ್ಲಾರು, ಕಾರ್ಯದರ್ಶಿ ಎಮ್. ಡಿ ವಿಜಯಕುಮಾರ್, ಕೋಶಾಧಿಕಾರಿ ಮೋಹನ್ ಕೆ, ವೇದಿಕೆಯಲ್ಲಿದ್ದರು. ನೂತನ ಅಧ್ಯಕ್ಷರಾಗಿ ಕುಶಾಲಪ್ಪ ಟಿ, ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ, ಮಣಿಯಾನ ಪುರುಷೋತ್ತಮ ಹಾಗೂ ಇನ್ನಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಜಿಶ್ಮಿ ಲಿಜೋ ಹಾಗೂ ವೆಂಕಪ್ಪ ಕೇನಾಜೆ ಕಾರ್ಯಕ್ರಮ ನಿರೂಪಿಸಿ, ವೆಂಕಪ್ಪ ಕೇನಾಜೆ ವಂದಿಸಿದರು.

ಸಮಾರಂಭದಲ್ಲಿ
ಮಂಗಳೂರು ಯುನಿವರ್ಸಿಟಿಯಲ್ಲಿ 10 ನೇ ರ್ಯಾಂಕ್ ಶ್ರಾವ್ಯ ಮುತ್ಲಾಜೆ, ಗುತ್ತಿಗಾರು ಪಿ.ಯು. ನ ರಮ್ಯ ಎನ್.ವಿ , ಗುತ್ತಿಗಾರು ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಯ ನಮಿತಾ ಮರಿಯಾ ಪರವಾಗಿ ತಂದೆ ನೆಲ್ಸನ್ , ಕುರಿಯಾ ಕೋಸ್ ನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಹಿತಾ ಗೋಳ್ಯಾಡಿ, ಪರವಾಗಿ ಅವರ ತಂದೆ ದಿನೇಶ್ ಗೋಳ್ಯಾಡಿ ಅವರಿಗೆ ಶಾಲು, ಹಾರ, ಸ್ಮರಣಿಕೆ, ನಗದು ನೀಡಿ ಗೌರವಿಸಲಾಯಿತು.