ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ಯ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ 13ನೇ ವರ್ಷದ ವಾರ್ಷಿಕ ಮಹಾಸಭೆಯು ಕೋಟೆ ಪೆರಾಜೆ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.

ಭಜನಾ ಮಂಡಳಿಯ ಅಧ್ಯಕ್ಷ ನಂದಕುಮಾರ್ ಅಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗೇಶ್ ಕುಂಡಾಡು ಅವರು ವಾರ್ಷಿಕ ಲೆಕ್ಕಪತ್ರ ಹಾಗೂ ವರದಿ ಮಂಡಿಸಿದರು.

ಈ ಸಂದರ್ಭದಲ್ಲಿ 2024-25ನೇ ಸಾಲಿನ ಹೊಸ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜಗದೀಶ್ ಬಂಗಾರಕೋಡಿ, ಅಧ್ಯಕ್ಷರಾಗಿ ಸುಭಾಶ್ಚಂದ್ರ ಬಂಗಾರಕೋಡಿ, ಕಾರ್ಯದರ್ಶಿಯಾಗಿ ನಾಗೇಶ್ ಕುಂಡಾಡು ಆಯ್ಕೆಯಾದರು. ಖಜಾಂಜಿಯಾಗಿ ತೊಕ್ಕುಳಿ ರಾಮಯ್ಯ, ಸಂಚಾಲಕರಾಗಿ ವಿಶ್ವನಾಥ ಬಂಗಾರಕೋಡಿ ಆಯ್ಕೆಯಾದರು.

ಸದಸ್ಯರುಗಳಾಗಿ ನಂಜಪ್ಪ ಅಡ್ಕ, ನಂದಕುಮಾರ್ ಅಡ್ಕ, ರವಿಕುಮಾರ್ ಬಂಗಾರಕೋಡಿ, ಧರ್ಮಪಾಲ ಕಾಪಿಲ, ವಿನಯ ಬಂಗಾರಕೋಡಿ, ಸುಂದರ ವ್ಯಾಪಾರೆ, ಆಶಾ ತೊಕ್ಕುಳಿ, ಮಾದಪ್ಪ ತೊಕ್ಕುಳಿ, ಮಾದಪ್ಪ ಅಡ್ಕ, ರಾಜಾರಾಮ ಬಂಗಾರಕೋಡಿ, ಶ್ರೀಮತಿ ವಿದ್ಯಾಕುಮಾರಿ ಬಂಗಾರಕೋಡಿ ಆಯ್ಕೆಯಾದರು.