ಆಲೆಟ್ಟಿ ಯಾದವಸಭಾ ಪ್ರಾದೇಶಿಕ ಸಮಿತಿ ವಾರ್ಷಿಕ ಮಹಾಸಭೆ

0

ಆಲೆಟ್ಟಿ ಯಾದವಸಭಾ ಪ್ರಾದೇಶಿಕ ಸಮಿತಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.7ರಂದು ಆಲೆಟ್ಟಿ ಗ್ರಾಮ ಪಚಾಯತ್ ಸಭಾ ಭವನದಲ್ಲಿ ನಡೆಯಿತು.

ಪ್ರಾದೇಶಿಕ ಸಮಿತಿ ಅಧ್ಯಕ್ಷ ರಾಮಚಂದ್ರ ಆಲೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಅಧ್ಯಕ್ಷ ಎ. ಕೆ. ಮಣಿಯಾಣಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕೇಂದ್ರ ಸಲಹಾಮಂಡಳಿ ಅಧ್ಯಕ್ಷ ಸುಧಾಮ ಅಲೆಟ್ಟಿ, ಸುಳ್ಯ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಕಣಕ್ಕೂರು ಕೊರಗಪ್ಪ ಮಾಸ್ತರ್, ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ , ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸೀತಾರಾಮ ಕಣಕ್ಕೂರು ವೇದಿಕೆಯಲ್ಲಿದ್ದರು.
ಸೀತಾರಾಮ ಕಣಕ್ಕೂರು ಸ್ವಾಗತಿಸಿ, ಮಹಾಲಿಂಗ ಮಣಿಯಾಣಿ ಕಣಕ್ಕೂರು ವರದಿ ವಾಚನ ಮಾಡಿದರು. ರಾಜಶೇಖರ ಕಣಕ್ಕೂರು ಲೆಕ್ಕಪತ್ರ ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಪ್ರಗತಿಪರ ಕೃಷಿಕರಾದ ಬಾಲಕೃಷ್ಣ ಹಾಸ್ಪಾರೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರವೀಣ್ ಅಲೆಟ್ಟಿ ಪ್ರಾರ್ಥಿಸಿ, ಗ್ರಾಮಪಂಚಾಯತ್ ಸದಸ್ಯ ದಿನೇಶ್ ಕಣಕ್ಕೂರು ವಂದಿಸಿದರು. ಪ್ರವೀಣ್ ಆಲೆಟ್ಟಿ ಮತ್ತು ರಾಜೇಶ್ ಮಾಸ್ತರ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಗೀತಾ ಸುಧಾಮ ಅಲೆಟ್ಟಿ, ಸನ್ಮಾನಿತರ ವಿವರ ವಾಚಿಸಿದರು. ಪ್ರಾದೇಶಿಕ ಸಮಿತಿ ವ್ಯಾಪ್ತಿಯೊಳಗಿನ ಸಮುದಾಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.