ಹಾಕಿ ಪಂದ್ಯಾಟಕ್ಕೆ ಕರ್ನಾಟಕದಿಂದ ವಿಶ್ವಜಿತ್ ಕೆ.ವಿ. ಆಯ್ಕೆ

0

ಆಂಧ್ರಪ್ರದೇಶದ ಕಡಪದಲ್ಲಿ ಜು.10 ರಂದು ನಡೆಯಲಿರುವ ಹಾಕಿ ಇಂಡಿಯಾ ನ್ಯಾಷನಲ್ ದಕ್ಷಿಣ ವಲಯ ಹಾಕಿ ಪಂದ್ಯಾವಳಿಗೆ ಕರ್ನಾಟಕದಿಂದ ವಿಶ್ವಜಿತ್ ಕೆ.ವಿ ಆಯ್ಕೆಯಾಗಿದ್ದಾರೆ.
ಇವರು ಮೂಲತಃ ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮ ಕುಂಭಗೌಡನ ಮನೆ ವಿನೋದ್ ಕುಮಾರ್ ಹಾಗೂ ಶ್ರೀಮತಿ ಜಲಜಾಕ್ಷಿ ಅಡ್ಪಂಗಾಯ ದಂಪತಿ ಪುತ್ರ.ಅಜ್ಜಾವರ ಗ್ರಾಮದ ಅಡ್ಪಂಗಾಯ ದಿ.ಸಣ್ಣಯ್ಯ ಗೌಡ ಮತ್ತು ದಿ.ರಾಮಕ್ಕ ರವರ ಮೊಮ್ಮಗ.