ದೇವಚಳ್ಳ ಗ್ರಾ.ಪಂ ಸಭೆ

0

ಕರಂಗಲ್ಲು ರಸ್ತೆ ಶಂಕುಸ್ಥಾಪನೆ ಆಗಿ ಕೆಲಸ ಆಗದ ಬಗ್ಗೆ, ಶಾಲೆಯವರು ಸಾರ್ವಜನಿಕರಿಗೆ ಸ್ಪಂದಿಸದಿರುವ ಬಗ್ಗೆ ಚರ್ಚೆ

ದೇವಚಳ್ಳ ಗ್ರಾ.ಪಂ ನ ಗ್ರಾಮ ಸಭೆ ಜು.10 ರಂದು ನಡೆಯಿತು.

ಸಭೆಯಲ್ಲಿ ಕರಂಗಲ್ಲು ರಸ್ತೆ ಶಂಕುಸ್ಥಾಪನೆ ಆಗಿ ಕೆಲಸ ಆಗದ ಬಗ್ಗೆ, ಕರಗಲ್ಲು ಶಾಲೆಯವರು ಸಾರ್ವಜನಿಕರಿಗೆ ಸ್ಪಂದಿಸದಿರುವುದು, ಗೇಟ್ ಮುಚ್ಚುವ ವಿಚಾರದ ಬಗ್ಗೆ, ಶಿಕ್ಷಕರ ಕೊರತೆ ಮತ್ತಿತರರ ವಿಷಯದ ಬಗ್ಗೆ ಚರ್ಚೆ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಶೈಲೇಶ್ ಅಂಬೆಕಲ್ಲು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ ಸೇವಾಜೆ, ಸದಸ್ಯರುಗಳಾದ ದುರ್ಗಾನಾಥ ಮೆತ್ತಡ್ಕ, ಪ್ರಶಾಂತ್ ಮೆದು, ರಮೇಶ ಪಡ್ಪು, ಭವಾನಿಶಂಕರ ಮುಂಡೋಡಿ, ಶ್ರೀಮತಿ ಸುಲೋಚನ ದೇವ, ಶ್ರೀಮತಿ ಪ್ರೇಮಲತಾ ಕೇರ, ಶ್ರೀಮತಿ ರಾಜೇಶ್ವರಿ ಮಾವಿನಕಟ್ಟೆ, ಶ್ರೀಮತಿ ಸೀತಮ್ಮ ಕರಂಗಲ್ಲು, ಪಿಡಿಒ ಗುರುಪ್ರಸಾದ್, ಉಪಸ್ಥಿತರಿದ್ದರು.

ಗ್ರಂಥಪಾಲಕಿ ಪ್ರಫುಲ್ಲ
ಸ್ವಾಗತಿಸಿದರು, ಗ್ರಾ.ಪಂ ನ ಕ್ಲರ್ಕ್ ಶಿವರಾಮ ಕೆ ವರದಿ ವಾಚಿಸಿದರು. ಶೈಲೇಶ್ ಅಂಬೆಕಲ್ಲು ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.