ಸುಳ್ಯದಲ್ಲಿ ಮಾನಸ ಗಂಗಾ ಸಹಕಾರ ಸಂಘದ 5ನೇ ಶಾಖೆಯ ಉದ್ಘಾಟನೆ

0

ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಡ್ಕಾರ್ ಆರ್ಕೇಡ್ ನಲ್ಲಿ ಮಾನಸ ಗಂಗಾ ಸಹಕಾರ ಸಂಘದ 5 ನೇ ಶಾಖೆಯು ಜು.15 ರಂದು ಉದ್ಘಾಟನೆಗೊಂಡಿತು.


ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವು ನೆರವೇರಿತು.


ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಾನಸ ಗಂಗಾ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ಕೆ.ವಿ ಯವರು ವಹಿಸಿದ್ದರು.


ಎ.ಒ.ಎಲ್.ಇ.ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಸಂಸ್ಥೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ದೀಪ ಪ್ರಜ್ವಲಿಸಿದರು.


ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರೊ.ಕೆ.ಸೀತಾರಾಮ ರೈ ಸವಣೂರು‌ ಸೇಫ್ ಲಾಕರಿಗೆ ನಗದು ಇಡುವ ಮೂಲಕ ಚಾಲನೆ ನೀಡಿದರು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಗಣಕ ಯಂತ್ರಕ್ಕೆ ಚಾಲನೆ ನೀಡಿದರು. ಸುಳ್ಯ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ಅಡ್ಕಾರ್ ಆರ್ಕೇಡ್ ಮಾಲಕ ದಿನೇಶ್ ಅಡ್ಕಾರ್,ನಿವೃತ್ತ ಗ್ರಾಮ ಕರಣಿಕ ಸಂಘದ ಪಿ.ಆರ್.ಒ ಕೇರ್ಪಳ ವಿಜಯಕುಮಾರ್ ರವರು ಉಪಸ್ಥಿತರಿದ್ದರು.

ಸಂಘದ ಉದ್ಯೋಗಿ ಕು.ದಿವ್ಯ ಮತ್ತು ಕು. ಯಶ್ವಿತಾ ಪ್ರಾರ್ಥಿಸಿದರು. ಸುಳ್ಯ ಶಾಖಾ ವ್ಯವಸ್ಥಾಪಕ ದಿನೇಶ್ ಕುಮಾರ್ ಕೆ‌.ಸಿ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪೂರ್ಣಿಮಾ ಎನ್ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕಿ ಶ್ರೀಮತಿ ನೀತಾ ಎನ್ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು.


ಸಂಘದ ಉಪಾಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಆಹ್ವಾನಿತ ಬಂಧು ಮಿತ್ರರು ಭಾಗವಹಿಸಿದರು.