ಹೂವಪ್ಪ ಗೌಡ ಕಣಜಾಲು, ಕಂಚುಗಾರಗದ್ದೆ ಅವರಿಗೆ ಶ್ರದ್ಧಾಂಜಲಿ ಸಭೆ

0

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪಗೌಡ ಕಣಜಾಲು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಜು.12 ರಂದು ನಡೆಸಲಾಯಿತು.

ಸೊಸೈಟಿ ಅಧ್ಯಕ್ಷ ಹರ್ಷಕುಮಾರ್ ದೇವಜನ ಮೃತರ ಬಗ್ಗೆ ನುಡಿನಮನ ಅರ್ಪಿಸಿದರು. ಉಪಾಧ್ಯಕ್ಷರಾದ ಶೇಖರ್ ಅಂಬೆಕಲ್ಲು, ನಿರ್ದೇಶಕರುಗಳಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ಮೋನಪ್ಪ ಕೊಳಗೆ, ತಾರಾನಾಥ ಮುಂಡಾಜೆ, ಗಿರೀಶ್ ಕಟ್ಟೆಮನೆ, ಸುರೇಶ ಚಾಳೆಪ್ಪಾಡಿ, ಬೊಳಿಯ ಬೆಂಡೋಡಿ, ರಾಜೇಶ್ ಪಿ, ವಿಜಯ ಕಜ್ಜೋಡಿ, ವಿಜಯ ಕೂಜುಗೋಡು, ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಸಿಬ್ಬಂದಿಗಳು ಉಪಸ್ಥಿತರಿದ್ದರು.