ದೊಡ್ಡತೋಟ ದ ಬಳಿ ಅಪಾಯ ಆಹ್ವಾನಿಸುತ್ತಿರುವ ಒಣಗಿದ ಮರ

0

ಶೀಘ್ರದಲ್ಲೇ ಮರ ತೆರವುಗೊಳಿಸಲು ಊರವರ ಒತ್ತಾಯ

ಸೋಣಂಗೇರಿ – ಗುತ್ತಿಗಾರು ರಸ್ತೆಯ ದೊಡ್ಡತೋಟ-ಗುಂಡಿಯಂಗಡಿ ಮಧ್ಯೆ 4 ಒಣಗಿದ ಮರಗಳು ಅಪಾಯವನ್ನು ಆಹ್ವಾನಿಸುತ್ತಿದೆ. ಎಲ್ಲಾ ಮರಗಳು ಮುಖ್ಯರಸ್ತೆಯತ್ತ ಬೀಳುವ ಸಾಂಭಾವ್ಯತೆ ಇದ್ದು, ರಸ್ತೆಯಲ್ಲಿ ಶಾಲಾ ಮಕ್ಕಳ ವಾಹನಗಳು ಸೇರಿದಂತೆ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ ವಾಹನ ಸವಾರರಲ್ಲಿ ಆತಂಕ ಮತ್ತು ಭಯ ಕಾಡಲಾರಂಭಿಸಿದೆ. ಹೀಗಾಗಿ ಈ ಮರಗಳನ್ನು ತಕ್ಷಣ ತೆರವು ಮಾಡಬೇಕೆಂದು ಈ ಭಾಗದವರು ಒತ್ತಾಯಿಸಿದ್ದಾರೆ.