ಗಣಪತಿ ಗೌಡ ಕುಂಬಳಚೇರಿ ನಿಧನ

0

ಪೆರಾಜೆ ಗ್ರಾಮದ ಗಣಪತಿ ಗೌಡ ಕುಂಬಳಚೇರಿಯವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 91 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಪೂವಮ್ಮ , ಪುತ್ರರು ಬೆಂಗಳೂರು ಹೈಕೋರ್ಟ್ ವಕೀಲರಾದ ದಯಾನಂದ ಕುಂಬಳಚೇರಿ, ಜಗದೀಶ ಕುಂಬಳಚೇರಿ, ಪುತ್ರಿಯಾದ ಕಸ್ತೂರಿ ಕೆ.ಜಿ, ನರಿಯೂರು ಸವಣೂರು ವಿದ್ಯಾರಶ್ಮಿ ಕಾಲೇಜಿನ ಉಪನ್ಯಾಸಕರು. ಇವರು ಪೆರಾಜೆ ಶಾಸ್ತಾವು ದೇವಸ್ಥಾನದ ಹಿರಿಯ ತಕ್ಕರು .ಕುಂಬಳಚೇರಿ ವಯನಾಟ್ ಕುಲವನ್ ನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಕುಟುಂಬದ ಹಿರಿಯರಾಗಿದ್ದರು.