ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಮುಕ್ಕೂರು ಸ.ಹಿ.ಪ್ರಾ.ಶಾಲೆಯಲ್ಲಿ ವನಮಹೋತ್ಸವ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಇದರ ವತಿಯಿಂದ ಮುಕ್ಕೂರು ಸ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜು. 23ರಂದು ನಡೆಯಿತು.
ಶಾಲಾ ಆವರಣದಲ್ಲಿ ವಿವಿಧ ಫಲವಸ್ತುಗಳ ಗಿಡಗಳನ್ನು ನಡೆಸಲಾಯಿತು.


ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಉಷಾ ಬಿ ಭಟ್, ನಿಕಟಪೂರ್ವಾಧ್ಯಕ್ಷ ವಿಠಲ್ ಶೆಟ್ಟಿ ಪರುವಾಜೆ, ಸದಸ್ಯರಾದ ಭವಾನಿ ವಿ. ಶೆಟ್ಟಿ, ನಿಕಟಪೂರ್ವ ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ಗಣೇಶ್ ರೈ, ಹೊನ್ನಪ್ಪ ಬೆಳ್ಳಾರೆ, ರಕ್ಷಿತ್ ಪೆರುವಾಜೆ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ, ಸಹಶಿಕ್ಷಕಿ ಸೌಮ್ಯ ಬಿ, ಅತಿಥಿ ಶಿಕ್ಷಕಿ ಕವಿತಾ, ಗೌರವ ಶಿಕ್ಷಕಿ ಅಪೂರ್ವ, ಅಂಗನವಾಡಿ ಶಿಕ್ಷಕಿ ರೂಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಂತ್ ಗೌಡ, ಉಪಾಧ್ಯಕ್ಷೆ ಶ್ರೀಮತಿ ಸುಮತಿ ರೈ, ಸದಸ್ಯರಾದ ದಯಾನಂದ, ಪ್ರಶಾಂತ್ ರೈ, ಸ್ಥಳೀಯರಾದ ಗಂಗಾಧರ, ತಾರಾನಾಥ ಸೇರಿದಂತೆ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಲಯನ್ಸ್ ಕ್ಲಬ್‌ನ ತೃತೀಯ ಉಪಾಧ್ಯಕ್ಷ ದಯಾಕರ ಆಳ್ವಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್‌ನ ಕೋಶಾಧಿಕಾರಿ ಈಶ್ವರ ವಾರಣಾಶಿ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಘು ಉಪಹಾರ, ಸಿಹಿತಿಂಡಿ ವಿತರಿಸಲಾಯಿತು.