ಮರಸಾಗಾಟದಿಂದ ರಸ್ತೆ ಹಾಳಾಗಿದೆ… : ಗ್ರಾ.ಪಂ. ಗೆ ಮನವಿ

0

ಉಬರಡ್ಕ ಮಿತ್ತೂರು – ಕಕ್ಕೆಬೆಟ್ಟು ಹೋಗುವ ಪಂಚಾಯತ್ ರಸ್ತೆಯ ಮೇಲೆ ಜಗದೀಶ್ ಎಂಬವರು ಕ್ರೇನ್ ಮೂಲಕ ಮರಸಾಗಿಸಿರು ವುದರಿಂದ ರಸ್ತೆಯು ಸಂಪೂರ್ಣವಾಗಿ ಹದಗಟ್ಟು ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಉಬರಡ್ಕ ಗ್ರಾ.ಪಂ. ಗೆ ರವಿಕುಮಾರ್ ಕಕ್ಕೆಬೆಟ್ಟು ನೇತೃತ್ವದಲ್ಲಿ ಆ ರಸ್ತೆ ಫಲಾನುಭವಿಗಳು ಮನವಿ ಸಲ್ಲಿಸಿದ್ದಾರೆ.

ಜಗದೀಶ್‌ ರವರು ಮರಕಡಿದು ಕ್ರೇನ್ ಮೂಲಕ ಸಾಗಿಸಿರುವುದರಿಂದ ಗ್ರಾಮಸ್ಥರು ಉಪಯೋಗಿಸುವ ಉಬರಡ್ಕ ಮಿತ್ತೂರು-ಕಕ್ಕೆಬೆಟ್ಟು ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ವಾಹನ ಚಲಾಯಿಸಿಕೊಂಡು ಹೋಗಲು ಮತ್ತು ಶಾಲಾಮಕ್ಕಳಿಗೆ ನಡೆದುಕೊಂಡು ಹೋಗಲು ಕೂಡಾ ಅಸಾಧ್ಯವಾಗಿರುತ್ತದೆ.

ಆದುದರಿಂದ ತಾವುಗಳು ಕೂಡಲೇ ರಸ್ತೆಯನ್ನು ಇಂದು ಸಂಜೆಯೊಳಗೆ ಸರಿಪಡಿಸಿ ವಾಹನ ಮತ್ತು ಜನರಿಗೆ ಶಾಲಾ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡಲು ಸೂಕ್ತ ಕ್ರಮಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಆ ಭಾಗದ ರಸ್ತೆ ಫಲಾನುಭವಿಗಳು ಸಹಿ ಮಾಡಿ ಗ್ರಾ.ಪಂ. ಪಿಡಿಒ ರವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ರಸ್ತೆ ಹಾಳಾಗಿರುವ ಫೋಟೊ ಕೂಡಾ ಮನವಿಯಲ್ಲಿ ಲಗತ್ತಿಸಿರುವುದಾಗಿ ತಿಳಿದುಬಂದಿದೆ.