ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ಸದಸ್ಯರಾಗಿದ್ದು, ಜು.24 ರಂದು ನಿಧನರಾದ ಶ್ರೀಮತಿ ಸರಸ್ವತಿ ನಾಯಕ್ ರವರಿಗೆ ಮರಣ ಸಾಂತ್ವನ ನಿಧಿ ರೂ.9000/- ವನ್ನು ಮೃತರ ಪುತ್ರರಾದ ಶುಭಕರ ನಾಯಕ್, ಪ್ರಭಾಕರ ನಾಯಕ್, ಸುರೇಶ್ ನಾಯಕ್ ರವರಿಗೆ ಜು.24 ರಂದು ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರು ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಜೇಶ್ ಭಟ್ ನೆಕ್ಕಿಲ, ನಿರ್ದೇಶಕರುಗಳಾದ ಪಿ.ಎಸ್ ಗಂಗಾಧರ್, ವಿಜಯಕುಮಾರ್ ಉಬರಡ್ಕ, ಶ್ರೀಮತಿ ಶಾರದಾ ಡಿ. ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಮತ್ತು ಶಿವರಾಮ ಎಂ.ಪಿ, ಜತ್ತಪ್ಪ ಗೌಡ ಶೆಟ್ಟಿಮಜಲು ಉಪಸ್ಥಿತರಿದ್ದರು.