ಸುಬ್ರಹ್ಮಣ್ಯ: 54ನೇ ಗಣೇಶೋತ್ಸವ ಸಮಿತಿ ರಚನೆ

0

ಅಧ್ಯಕ್ಷರಾಗಿ ದಿನೇಶ್ ಮೊಗ್ರ, ಕಾರ್ಯದರ್ಶಿ ದೀಪಕ್ ನಂಬಿಯಾರ್, ಕೋಶಾಧಿಕಾರಿ ಹರಿಪ್ರಸಾದ್ ಮಲ್ಲಾಜೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ 54ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಮೊಗ್ರ ಆಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ದೀಪಕ್ ನಂಬಿಯಾರ್, ಕೋಶಾಧಿಕಾರಿಯಾಗಿ ಹರಿಪ್ರಸಾದ್ ನಾಯರ್ ಮಲ್ಲಾಜೆ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಯಶೋಧಕೃಷ್ಣ ನೂಚಿಲ, ಭರತ್ ನೆಕ್ರಾಜೆ, ವಿನ್ಯಾಸ್ ಹೊಸೋಳಿಕೆ, ನಿತಿನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್ ಆಯ್ಕೆಯಾದರು. ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್ ಮತ್ತು ರಾಜೇಶ್ ಎನ್.ಎಸ್ ಸಮಿತಿಯ ಸಂಚಾಲಕರಾಗಿ ಮುಂದುವರೆಸಲಾಯಿತು. ಪೂರ್ವಾಧ್ಯಕ್ಷ ದಿನೇಶ್ ಸಂಪ್ಯಾಡಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಶಾಶ್ವತ ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ, ಶಾಶ್ವತ ಕೋಶಾಧಿಕಾರಿಯಾಗಿ ಶ್ರೀಕೃಷ್ಣ ಶರ್ಮ, ಜತೆ ಕಾರ್ಯದರ್ಶಿಯಾಗಿ ಮನೋಜ್ ಕುಮಾರ್.ಎಸ್, ಗಿರೀಶ್ ಆಚಾರ್ಯ ಪೈಲಾಜೆ, ಜಯರಾಮ ಎಚ್.ಎಲ್ ಸಹಾಯಕ ಕೋಶಾಧಿಕಾರಿಯಾಗಿ ಅಚ್ಚುತ್ತ ಗೌಡ, ಶ್ರೀಕುಮಾರ್ ಬಿಲದ್ವಾರ, ದೇವಿಚರಣ್ ಕಾನಡ್ಕ ನೇಮಕಗೊಂಡರು. ಉಳಿದಂತೆ ನಿರಂಜನ ಭಟ್ ವೈದಿಕ ಸಮಿತಿ, ಉಮೇಶ್ ಕೆ.ಎನ್,ಲೋಕೇಶ್ ಬಿ.ಎನ್ ಕ್ರೀಡಾ ಸಮಿತಿ, ಪಪ್ಪು ಲೋಕೇಶ್ ಅದೃಷ್ಠಚೀಟಿ ಸಮಿತಿ, ರಾಜೇಶ್ ಎನ್.ಎಸ್ ಸಾಂಸ್ಕೃತಿಕ ಸಮಿತಿ, ರವಿ ಕಕ್ಕೆಪದವು ಶೋಭಾಯಾತ್ರೆ ಸಮಿತಿ, ಪ್ರಕಾಶ್ ಸುಬ್ರಹ್ಮಣ್ಯ ಮೆರವಣಿಗೆ ಸಮಿತಿ, ರವೀಂದ್ರ.ಕೆ.ಸುಬ್ರಹ್ಮಣ್ಯ ಸಾಂಸ್ಕೃತಿಕ ಸ್ಪರ್ಧಾ ಸಮಿತಿ, ಪ್ರಶಾಂತ್ ಆಚಾರ್ಯ, ಸುಕೇಶ್ ಸುದಿ ಆಹಾರ ಸಮಿತಿ, ಹರೀಶ್ ಅಗರಿಕಜೆ, ಪ್ರಶಾಂತ್ ಮೂಜೂರು ಅಲಂಕಾರ ಸಮಿತಿ ಸಂಚಾಲಕರಾಗಿ ಆಯ್ಕೆಯಾದರು. ಅಲ್ಲದೆ ಸಮಿತಿ ಸದಸ್ಯರನ್ನು ಹಾಗೂ ಉಪಸಮಿತಿ ಸದಸ್ಯರನ್ನು ಸಭೆಯಲ್ಲಿ ನೇಮಿಸಲಾಯಿತು.