ಬಿಜೆಪಿ – ಜೆಡಿಎಸ್ ಮೈಸೂರುಚಲೋ ಪಾದಯಾತ್ರೆ

0

ಪೆರಾಜೆ ಬಿಜೆಪಿ ಕಾರ್ಯಕರ್ತರು ಭಾಗಿ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಗರಣಗಳ ವಿರುದ್ದ ಪ್ರತಿಪಕ್ಷಗಳಾದ ಬಿಜೆಪಿ – ಜೆಡಿಎಸ್ ವತಿಯಿಂದ ನಡೆಯುತ್ತಿರುವ ಮೈಸೂರುಚಲೋ ಪಾದಯಾತ್ರೆಯಲ್ಲಿ ಪೆರಾಜೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಶಕ್ತಿಕೇಂದ್ರದ ಅಧ್ಯಕ್ಷ ಸುಭಾಷ್ ಚಂದ್ರ ಬಂಗಾರಕೋಡಿ, ಉದಯಚಂದ್ರ ಕುಂಬಳಚೇರಿ, ಪ್ರವೀಣ್ ಮಜಿಕೋಡಿ, ಪ್ರಸನ್ನ ನೆಕ್ಕಿಲ, ಪ್ರದೀಪ್ ಕುಂಬಳಚೇರಿ, ದಿವ್ಯಪ್ರಕಾಶ್ ಕೊಳಂಗಾಯ, ಸತೀಶ್ ಬಾಳಕಜೆ, ಹೇಮಚಂದ್ರ ಪೆರಾಜೆ, ಮೋಹನ ಬೆಳ್ಳೂರು ಭಾಗವಹಿಸಿದ್ದರು.